ಧಾರವಾಡ prajakiran.com : ಧಾರವಾಡ ಜಿಲ್ಲೆಯ ಬಲು ಅಪರೂಪದ ಕಲಾವಿದರು ಹಾಗೂ ಗಳಗಿ ಹುಲಕೊಪ್ಪ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರು ಆಗಿದ್ದ ಸಂಜೀವ ಕಾಳೆಯವರನ್ಬು ಕರೋನಾ ಬಲಿ ಪಡೆದಿದೆ.
ಧಾರವಾಡ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹಾಗೂ ನಾಡಿನ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದ ಸಂಜೀವ ಕಾಳೆ ವಿಧಿವಶರಾಗಿರುವುದು ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ.
ಕಳೆದ ತಿಂಗಳು ಡಿ.ವಿ ಹಾಲಭಾವಿ ಟ್ರಸ್ಟ ನ ಧಾರವಾಡದ” ಐತಿಹಾಸಿಕ ಕಟ್ಟಡ”ಗಳ ಚಿತ್ರಕಲಾ ಶಿಬಿರದಲ್ಲಿ ಅವರು ರಚಿಸಿದ ಈ ಕಲಾಕೃತಿ ಯೇ ಕೊನೆಯದು ಅಂತಾ ಅನ್ನಿಸುತ್ತೆ ಎಂದು ನೋವು ಹಂಚಿಕೊಂಡಿದ್ದಾರೆ.