ಯಾದಗಿರಿ prajakiran.com : ಮಚ್ಚಿನಿಂದ ಹೊಡೆದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ(ಕೆ) ಗ್ರಾಮದಲ್ಲಿ ನಡೆದಿದೆ.
ಖಾಸಿಂಸಾಬ್ ತಂದೆ ಚಾಂದ್ ಸಾಬ್ ಚೌದ್ರಿ (50) ಬಕ್ರೀದ್ ಹಬ್ಬ ಇದ್ದ ಕಾರಣ ಬೆಳಗಿನ ಜಾವ ಪ್ರಾರ್ಥನೆಗೆ ತೆರಳುವ ವೇಳೆ ಯಾರೋ ದುಷ್ಕರ್ಮಿಗಳು ಬೈಕ್ ತಡೆದು ಅವರನ್ನು ಕೆಳಗೆ ಬೀಳಿಸಿ ತಲೆಗೆ ಹರಿತವಾದ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ್ ಹೂಗಿಬಂಡಿ ಸಿಪಿಐ ಶ್ರೀನಿವಾಸ ಅಲ್ಲಾಪುರ,ಹಾಗೂ ಪಿಎಸ್ಐ ಸೋಮು ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ ಖಾಸಿಂಸಾಬ್ ಮೃತದೇಹವನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಮಟನ್ ವ್ಯಾಪಾರಿಯಾಗಿದ್ದ ಖಾಸಿಂಸಾಬ್ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಆರೋಪಿಗಳ ಪತ್ತೆಗಾಗಿ ಗೋಗಿ ಪೋಲಿಸರು ಬಲೆ ಬೀಸಿದ್ದಾರೆ.