ಧಾರವಾಡ prajakiran.com : ಧಾರವಾಡದ ವೀರಭದ್ರೇಶ್ವರ ಇನ್ಫ್ರಾಸ್ಟಕ್ಷನ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ಬಿಜೆಪಿ ಮುಖಂಡ ನಾಗನಗೌಡ ಪಾಟೀಲ ನೀರಲಗಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಧಾರವಾಡದ ಸಾರಸ್ವತಪುರ ಬಡಾವಣೆಯಲ್ಲಿರುವ ಕಂಪನಿ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಹಲ್ಲೆ ಮಾಡಿದವನನ್ನು ಕರ್ನಾಟಕ ನವನಿರ್ಮಾಣ ಸೇನೆಯ ಬೆಳಗಾವಿ ವಿಭಾಗೀಯ ಅಧ್ಯಕ್ಷ ಹಾಗೂ ಮೊರಬದ ಕುಮಾರ ಪಾಟೀಲ ಎಂದು ಹಲ್ಲೆಗೊಳಗಾದ ನಾಗನಗೌಡ ಪಾಟೀಲ ನೀರಲಗಿ ಹಾಗೂ ಅವರ ಪತ್ನಿ ಪೂರ್ಣಿಮಾ ನೀರಲಗಿ ಆರೋಪಿಸಿದರು.
ಈತ ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಹೆಸರಿನಲ್ಲಿ ದೌರ್ಜನ್ಯ ಎಸಗಿದ್ದು, ಅವರ ಕುಮ್ಮಕ್ಕಿನಿಂದಲೇ ಕಚೇರಿಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಕೊಡಲಿಯಿಂದ ಕುತ್ತಗಿಗೆ ಹೊಡೆಯಲು ಬಂದಾಗ ಅದನ್ನು ಕೈ ಯಿಂದ ತಡೆದಾಗ ಕೈಗೆ ಗಂಭೀರವಾದ ಗಾಯಗಳಾಗಿವೆ.
ರಕ್ತದ ಮಡುವಿನಲ್ಲಿಯೇ ವಿದ್ಯಾಗಿರಿ ಪೊಲೀಸರ ಮೊರೆ ಹೋಗಿದ್ದಾರೆ.
ಅವರು ತಕ್ಷಣ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮೊರಬ ಗ್ರಾಮದವನಾಗಿರುವ
ಕುಮಾರ ಪಾಟೀಲ್ನಿಂದ ಈ ಹಲ್ಲೆ ನಡೆದಿದ್ದು, ಈತ ಕರ್ನಾಟಕ ನವನಿರ್ಮಾಣ ಸೇನೆಯ ಹೆಸರಿನಲ್ಲಿ ದಬ್ಬಾಳಿಕೆ, ಬೆದರಿಕೆ ಮಾಡುತ್ತಿದ್ದಾನೆ.
ಈತ ಮೋಹನ ಲಿಂಬಿಕಾಯಿ ಅವರ ಜಮೀನಿಗೆ ಸಂಬಂಧಿಸಿದಂತೆ ಹಣ ವಸೂಲಿಗೆ ಬಂದಿದ್ದ.
ಈ ಹಿಂದೆ ಸಹ ಇದೇ ರೀತಿ ದಮ್ಕಿ ಹಾಕಿ ಹೋಗಿದ್ದ. ಆದರೆ ಈ ಬಾರಿ ಕೊಡಲಿ ಸಮೇತ ಕಚೇರಿಗೆ ಬಂದಿದ್ದ. ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ನಾಗನಗೌಡ ಪಾಟೀಲ ನೀರಲಗಿ ಆರೋಪಿಸಿದರು.
ಬಿಜೆಪಿ ಮುಖಂಡರು ಆಗಿರೋ ನೀರಲಗಿ ಸದ್ಯ ಧಾರವಾಡ
ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಈ ಕುರಿತು ಧಾರವಾಡದ
ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ತನಿಖೆ ಮುಂದುವರೆದಿದೆ.
ಹಲ್ಲೆ ಮಾಡಿ ಪರಾರಿಯಾಗಿರುವ ಮೊರಬದ ಕುಮಾರ ಪಾಟೀಲ ಬಂಧನಕ್ಕೆ ಪೊಲೀಸ್ ಜಾಲ ಬೀಸಿದ್ದಾರೆ.