ರಾಜ್ಯ

ಮಕ್ಕಳ ಪ್ರಾಣ ಭಯದಿಂದ ಸಿದ್ದರಾಮಯ್ಯ ಮೂಲಕ ಕೈ ಸೇರಿದ್ದೆ ಎಂದ ಮಲ್ಲಮ್ಮ ಗೌಡರ

 

ಧಾರವಾಡ prajakiran.com : ನಾನು ನನ್ನ ಮಕ್ಕಳ ಪ್ರಾಣ ಭಯದಿಂದ ಸಿದ್ದರಾಮಯ್ಯ ಮೂಲಕ ಕೈ ಸೇರಿದ್ದೆ ಎಂದು ಯೋಗೀಶ್ ಗೌಡರ ಪತ್ನಿ ಮಲ್ಲಮ್ಮ ಗೌಡರ  ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಬಿಐ ವಿಚಾರಣೆ ತೀವ್ರಗೊಂಡು ಅಂತಿಮ ಹಂತದ ತಲುಪಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದು ಅಚ್ಚರಿ ಹಾಗೂ ಭಾರೀ ಕುತೂಹಲ ಮೂಡಿಸಿದೆ.

ಈ ಹಿಂದೆ ಬಿಜೆಪಿ ನಾಯಕರ ಬಳಿ ಹೋಗಿ ಗೋಗರಿದರು. ಆಗ ಅವರು ಸಕರಾತ್ಮಕವಾಗಿ ಸ್ಪಂದಿಸಲಿಲ್ಲ.  ಗಂಡನನ್ನ ಕಳೆದುಕೊಂಡ ನೋವು ನಂಗೂ ಇದೆ ಎಂದು ಗೋಳು ತೋಡಿಕೊಂಡರು.

ಈ ಹಿಂದೆ ಕೊಲೆಯ ತನಿಖೆಗೆ ನಾನೇ ಮೊದಲು ಅರ್ಜಿ ಸಲ್ಲಿಸಿದ್ದು, ನನಗೆ ಆಗ ಸರಿಯಾದ ಬೆಂಬಲ ಸಿಗಲಿಲ್ಲ.

ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಮಾತ್ರ ನೆರವಿಗೆ ಬಂದಿದ್ದರು.  ಬಿಜೆಪಿಯವರು ಅವರಿಗೆ ಕೂಡ ಸಹಾಯ ಮಾಡಿಲ್ಲ ಎಂದು ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಹೇಳಿಕೆ ನೀಡಿದ್ದಾರೆ.

ಈಗ ಸಿಬಿಐ ವಿಚಾರಣೆ ಅಂತಿಮ ಘಟ್ಟ ತಲುಪಿದ್ದು ಖುಷಿ ತಂದಿದೆ. ಹಣದ ಆಮಿಷಕ್ಕೆ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿಲ್ಲ. ಕೇವಲ ಮಕ್ಕಳ ಪ್ರಾಣ ಭಯದಿಂದ ಸೇರಿದ್ದೆ ಅಷ್ಟೇಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ವಿಚಾರಣೆಗೆ ಕರೆದಿರುವುದು ಏನು ಹೊಸದಲ್ಲ.ಅಂತಹ ನೂರಾರು ಮುಖಂಡರಿಗೆ ವಿಚಾರಣೆಗೆ ಕರೆದಿದ್ದಾರೆ.

 ಸಿಬಿಐ  ವಿಚಾರಣೆ ಬಳಿಕ ಸತ್ಯಾಂಶ ಹೊರಬರಲಿದೆ. ಅಲ್ಲಿಯವರೆಗೆ ಕಾದು ನೋಡುವೆ ಎಂದು ಸ್ಪಷ್ಟಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *