ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ನಂತರ ಹೊರಬಂದ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಶ್ರೀ ಪಾಟೀಲ ಹಾಗೂ ನಟರಾಜ್ ಹೇಳಿಕೆ ನೀಡಿದ್ದಾರೆ.
ಸಿಬಿಐ ಅಧಿಕಾರಿಗಳು ಕರೆದು ವಿಚಾರಣೆ ನಡೆಸಿದ್ದಾರೆ. ಈ ಹಿಂದೆಯೂ ನಮ್ಮನ್ನ ಕರೆದು ವಿಚಾರಣೆ ಮಾಡಿದ್ದಾರೆ. ವಿನಯ ಡೈರಿಗೆ ಎತಕ್ಕೆ ಹೋಗ್ತಾ ಇದ್ರೀ ಅಂತಾ ಕೇಳಿದ್ರು.
ನಮ್ಮನ್ನ ಹಾಗೂ ವಿನಯ ಕುಲಕರ್ಣಿಯನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು ಸಿಬಿಐ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವೆ ಎಂದು ಹೇಳಿದ್ದಾರೆ.
ವಿನಯ ಕುಲಕರ್ಣಿ ಕಾಲ್ ಯಾಕೆ ಮಾಡಿದ್ರು. ಕಾಲ್ ಮಾಡಿ ಎನೂ ಹೇಳಿದ್ರು ಅಂತಾ ವಿಚಾರಣೆ ನಡೆಸಿದರು ಎಂದು ಅವರು ಹೇಳಿದರು.
ಅಲ್ಲದೆ, ನಾವೂ ತಪ್ಪು ಮಾಡಿಲ್ಲ. ಎನೂ ವಿಚಾರಣೆ ಮಾಡ್ತಾರೆ ಮಾಡಲಿ. ಸಿಬಿಐ ಅಧಿಕಾರಿಗಳು ಕೇಳಿದ ಮಾಹಿತಿ ನೀಡಿದ್ದೇನೆ. ವಿನಯ ಕುಲಕರ್ಣಿ ಡೈರಿಗೆ ಹಸು ಆಹಾರ ಕಳುಹಿಸುವ ವಿಚಾರದ ಬಗ್ಗೆ ಹೇಳಿದ್ರು.
ಅದನ್ನೆ ವಿಚಾರಣೆ ವೇಳೆ ಸಿಬಿಐ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಬಂದಿರುವೆ ಎಂದು ಸಿಬಿಐ ವಿಚಾರಣೆ ನಂತರ ವಿನಯ ಕುಲಕರ್ಣಿ ಸಂಬಂಧಿ ನಟರಾಜ ಹೇಳಿಕೆ ನೀಡಿದರು.