ರಾಜ್ಯ

ಸಿಬಿಐ ವಿಚಾರಣೆ ಬಳಿಕ ಹೊರ ಬಂದ ಶ್ರೀ ಪಾಟೀಲ, ನಟರಾಜ ಹೇಳಿಕೆ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ನಂತರ ಹೊರಬಂದ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಶ್ರೀ ಪಾಟೀಲ ಹಾಗೂ ನಟರಾಜ್ ಹೇಳಿಕೆ ನೀಡಿದ್ದಾರೆ.

ಸಿಬಿಐ ಅಧಿಕಾರಿಗಳು ಕರೆದು ವಿಚಾರಣೆ ನಡೆಸಿದ್ದಾರೆ. ಈ ಹಿಂದೆಯೂ ನಮ್ಮನ್ನ ಕರೆದು ವಿಚಾರಣೆ ಮಾಡಿದ್ದಾರೆ. ವಿನಯ ಡೈರಿಗೆ ಎತಕ್ಕೆ ಹೋಗ್ತಾ ಇದ್ರೀ ಅಂತಾ ಕೇಳಿದ್ರು.

ನಮ್ಮನ್ನ ಹಾಗೂ ವಿನಯ ಕುಲಕರ್ಣಿಯನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು ಸಿಬಿಐ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವೆ ಎಂದು ಹೇಳಿದ್ದಾರೆ.

ವಿನಯ ಕುಲಕರ್ಣಿ ಕಾಲ್ ಯಾಕೆ ಮಾಡಿದ್ರು. ಕಾಲ್ ಮಾಡಿ ಎನೂ ಹೇಳಿದ್ರು ಅಂತಾ ವಿಚಾರಣೆ ನಡೆಸಿದರು ಎಂದು ಅವರು ಹೇಳಿದರು.

ಅಲ್ಲದೆ, ನಾವೂ ತಪ್ಪು ಮಾಡಿಲ್ಲ. ಎನೂ ವಿಚಾರಣೆ ಮಾಡ್ತಾರೆ ಮಾಡಲಿ. ಸಿಬಿಐ ಅಧಿಕಾರಿಗಳು ಕೇಳಿದ ಮಾಹಿತಿ ನೀಡಿದ್ದೇನೆ. ವಿನಯ ಕುಲಕರ್ಣಿ ಡೈರಿಗೆ ಹಸು ಆಹಾರ ಕಳುಹಿಸುವ ವಿಚಾರದ ಬಗ್ಗೆ ಹೇಳಿದ್ರು.

ಅದನ್ನೆ ವಿಚಾರಣೆ ವೇಳೆ ಸಿಬಿಐ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಬಂದಿರುವೆ ಎಂದು ಸಿಬಿಐ ವಿಚಾರಣೆ ನಂತರ  ವಿನಯ ಕುಲಕರ್ಣಿ ಸಂಬಂಧಿ ನಟರಾಜ ಹೇಳಿಕೆ ನೀಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *