ರಾಯಚೂರು ಪ್ರಜಾಕಿರಣ.ಕಾಮ್ : ವಿದ್ಯುತ್ ಲೈನ್ ಹಾಕಲು ಹೋಗಿದ್ದ ಲೈನ್ ಮ್ಯಾನ್ ಒಬ್ಬರು ವಿದ್ಯುತ್ ತಗುಲಿ ಕಂಬದ ಮೇಲೆಯೇ ಸಾವನ್ನಪ್ಪಿದ ಘಟನೆ ರಾಯಚೂರಿನ ಅರಕೇರಾ ಬಳಿಯ ಜುಟ್ಡಮರಡಿ ಕೆ.ಬಿ ಯಲ್ಲಿ ನಡೆದಿದೆ.
ಮಲ್ಲೇದೇವರಗುಡ್ಡ ಗ್ರಾಪ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಲದಮರ ತಾಂಡದಲ್ಲಿ ಸಾವನ್ನಪ್ಪಿದ ಲೈನ್ ಮ್ಯಾನ್ ವಿರೂಪಾಕ್ಷಪ್ಪ ಎಂದು ಗುರುತಿಸಲಾಗಿದೆ.
ರೊಚ್ಚಿಗೆದ್ದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಜೆಇ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ದ ಗ್ರಾಮಸ್ಥರು ತರಾಟರಗೆ ತೆಗೆದುಕೊಂಡು ಬಿಸಿತಾಕಿಸಿದ್ದಾರೆ.
ಅಲ್ಲದೆ ಟೈರ್ ಸುಟ್ಟು ಹಾಕಿ ಜೆಸ್ಕಾಂ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯ ದಿಂದಾಗಿ ಲೈನ್ ಮ್ಯಾನ್ ವಿರುಪಾಕ್ಷಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.