ಫ್ರುಟ್ ಇರ್ಫಾನ್ ಸಹಚರನಿಂದಲೇ ಪುತ್ರ ಅರ್ಬಾಜ್ ಗೆ ಗನ್ ಸಪ್ಲೈ…..!?
ಮಹ್ಮದ್ ಕುಡಚಿ ಮರ್ಡರ್ ಗೆ ಮುನ್ನ ಕಂಟ್ರಿ ಪಿಸ್ತೂಲ್ ಖರೀದಿಸಿದ್ದ ಅರ್ಬಾಜ್
ಧಾರವಾಡ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ ಧಾರವಾಡ ಅವಳಿನಗರವನ್ನೇ ಬೆಚ್ಚಿ ಬೀಳಿಸಿದ್ದ ಡಬಲ್ ಮರ್ಡರ್ ಕೇಸ್ ತನಿಖೆ ವೇಳೆ ಪೊಲೀಸರು ಹತ್ತು ಹಲವು ರೋಚಕಗಳನ್ನು ಹೊರಗೆಡುತ್ತಲೇ ಇದ್ದಾರೆ.
ಕುಖ್ಯಾತ ರೌಡಿಶೀಟರ್ ಫ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಹಂಚಿನಾಳ ಹೆಸರಿನಲ್ಲಿ ಗಳಿಸಿದ್ದ ಎನ್ನಲಾದ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಬಿಟ್ಟುಕೊಡದೆ ಪೀಡಿಸುತ್ತಿದ್ದ
ಮಹ್ಮದ್ ಕುಡಚಿ ಮರ್ಡರ್ ಜೊತೆಗೆ ಇನ್ನೊಬ್ಬನ ಮರ್ಡರ್ ಮಾಡಲು ಸ್ಕೈಚ್ ಹಾಕಲಾಗಿತ್ತು ಎಂದು ಬಾಯಿ ಬಿಟ್ಟಿದ್ದಾರೆ.
ಅಲ್ಲದೆ, ಕೊಲೆ ಮಾಡಿ ಪರಾರಿಯಾದ ನಂತರವೂ ಮೊಬೈಲ್ ಕರೆ ಮಾಡಿ ದಮ್ಕಿ ಕೂಡ ಹಾಕಿದ್ದರು. ಹೀಗಾಗಿ ಮುಕ್ತುಂ ಸೊಗಲದ ಸೇರಿದಂತೆ ಹಲವು ಸಹಚರರ ವಿಚಾರಣೆ ನಡೆಸಲಾಗಿದೆ.
ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರೂಟ್ ಇರ್ಫಾನ್ ಪುತ್ರ ಅರ್ಬಾಜ್ ಬಳಿ
ಕೊಲೆ ಮಾಡಲು ಬಳಸಲಾಗಿದ್ದ ಕಂಟ್ರಿ ಪಿಸ್ತೂಲ್ ಎಲ್ಲಿಂದ ಬಂತು.
ಯಾರು ಯಾರ ಬಳಿ ಎಷ್ಟಕ್ಕೆ ಖರೀದಿಸಲಾಗಿತ್ತು. ಇದರಲ್ಲಿ ಯಾರ ಪಾತ್ರ ಎನೂ ಎಂಬುದರ ಕುರಿತು ಕುಲಂಕುಷವಾದ ವಿಚಾರಣೆ ಬಳಿಕ ಬಂದೂಕು ನೀಡಿದ್ದ ಆರೋಪದ ಮೇಲೆ ವಿದ್ಯಾಗಿರಿ ಪೊಲೀಸ್ ಠಾಣೆಯ ರೌಡಿಶೀಟರ್ ಮಂಜು ಸಾವಂತ ಎಂಬಾತನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ ಈ ಮಂಜು ಸಾವಂತ ಅರ್ಬಾಜ್ ತಂದೆ ಫ್ರೂಟ್ ಇರ್ಫಾನ್ ಸಹಚರನಾಗಿದ್ದು, ಜಿದ್ದಿ ಮಲ್ಲಿಕ್, ಜಾವೀದ್ ತಂಬೋಲಿ ಹಾಗೂ ಮಹ್ಮದ್ ಬಿಜಾಪೂರಿ ಮರ್ಡರ್ ಕೇಸ್ ನಲ್ಲಿ ಮೂರನೇ ಆರೋಪಿಯಾಗಿದ್ದ.
ಇದೀಗ ಮತ್ತೆ ಮಹ್ಮದ್ ಕುಡಚಿ ಮರ್ಡರ್ ಕೇಸ್ ನಲ್ಲೂ ಪೊಲೀಸರಿಗೆ ತಗಲು ಹಾಕಿಕೊಂಡಿದ್ದು, ಮತ್ತೆ ಜೈಲು ಪಾಲಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿವೆ.
ಮುಂದುವರಿದ ತನಿಖೆ
ಧಾರವಾಡ ಎಸಿಪಿ ವಿಜಯಕುಮಾರ್ ತಳವಾರ ಹಾಗೂ ಉಪನಗರದ ಪೊಲೀಸ್ ಠಾಣೆ ಇನ್ಸಪೆಕ್ಟರ್ ಶಂಕರಗೌಡ ಪಾಟೀಲ್ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗನಾಳ ಮತ್ತು ಅವರ ತಂಡ ಹತ್ತು ಹಲವು ಜನರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿ ಮಹತ್ವದ ಮಾಹಿತಿಯನ್ನು ಸಂಗ್ರಹಿಸಲು ಯತ್ನಿಸುತ್ತಿದ್ದಾರೆ.