ಪಂಢರಪುರ ವಾರಕರಿ ಸಂಪ್ರದಾಯದ ಮುಖ್ಯ ಪ್ರವರ್ತಕ ಅರ್ಜುನ್ ಅರ್ಜುನದಾದಾ ಪವಾರ ಇನ್ನು ನೆನಪು ಮಾತ್ರ….!
ಧಾರವಾಡ ಪ್ರಜಾಕಿರಣ.ಕಾಮ್ : ಪಂಢರಪುರದ ವಾರಕರಿ ಸಂಪ್ರದಾಯದ ಮುಖ್ಯ ಪ್ರರ್ವತಕರಾಗಿ ಕರ್ನಾಟಕ ರಾಜ್ಯಾದ್ಯಂತ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಹರಿಭಕ್ತ ಪಾರಾಯಣ ಅರ್ಜುನ ದಾದಾ ಬಾಪುರಾವ್ ಪವಾರ (82) ಇಂದು ಬೆಳಗಿನ ವಿಧಿವಶರಾದರು.
ಅವರು ಕಳೆದ ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಅರ್ಜುನದಾದಾ ಪವಾರ ಅವರು ಧಾರವಾಡ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಸೇರಿದಂತೆ ಬೆಂಗಳೂರು, ಮೈಸೂರ ಕರ್ನಾಟಕ ಭಾಗದಲ್ಲಿ ಕಳೆದ ಆರು ದಶಕಗಳಿಂದ ರಾಜ್ಯಾದ್ಯಂತ ಕೀರ್ತನ ಪ್ರವಚನ ಮೂಲಕ ಜನರಿಗೆ ಧರ್ಮೋಪದೇಶ ಮಾಡಿ ಸನ್ಮಾಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದ್ದರು.
ಅಲ್ಲದೆ, ಕನಕೂರನಿಂದ ಪಂಢರಪುರಕ್ಕೆ 29 ವರ್ಷಗಳಿಂದ ದಿಂಡಿ ತೆಗೆದುಕೊಂಡು ಪಾದಯಾತ್ರೆ ಕೈಗೊಂಡಿದ್ದರು.
ಇದರ ಜೊತೆಗೆ ಕನಕೂರ ಗ್ರಾಮದಲ್ಲಿ ವಿಶ್ವಶಾಂತಿ ಆಶ್ರಮ ಸ್ಥಾಪಿಸಿ ಅದರ ಮೂಲಕ ಅನಾಥರಿಗೆ ಅನ್ನ, ಆಶ್ರಯ ನೀಡಿ ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸಿ ದಾರಿ ದೀಪವಾಗಿದ್ದರು.
ಇಂದು ಸಂಜೆ 5 ಗಂಟೆಗೆ ಸ್ವಗ್ರಾಮ ಕನಕೂರಿನಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಅವರ ಅಕಾಲಿಕ ನಿಧನಕ್ಕೆ ಧಾರವಾಡ ಜಿಲ್ಲೆಯ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.