ಪತ್ನಿ ಶಿವಲೀಲಾ ಕುಲಕರ್ಣಿಯಿಂದ ಉಪನಗರ ಠಾಣೆಗೆ ದೂರು
ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ ಕಾಂಗ್ರೆಸಿಗರು
ಧಾರವಾಡ ಪ್ರಜಾಕಿರಣ.ಕಾಮ್ :
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಧಾರವಾಡದ ಮನೆಗೆ ಮತ್ತೆ ನಾಲ್ಕು ವರ್ಷಗಳ ಬಳಿಕ ಅನಾಮಧೇಯ ಪತ್ರಗಳು ಬರಲು ಆರಂಭಿಸಿವೆ ಎಂದು ಆರೋಪಿಸಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಶುಕ್ರವಾರ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಅವರಿಗೆ ಸಾಥ್ ನೀಡಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಶಿವಲೀಲಾ ಕುಲಕರ್ಣಿ, ನಮಗೆ ನಾಲ್ಕು ದಿನದಲ್ಲಿ ನನ್ನ ಹೆಸರಿಗೆ ಎರಡು, ವಿನಯ ಕುಲಕರ್ಣಿ ಹೆಸರಿಗೆ ಎರಡು ಅನಾಮಧಯೇ ಪತ್ರ ಬಂದಿವೆ. ರಾಜಕೀಯ ಷಡ್ಯಂತ್ರದಿಂದ ಈ ರೀತಿ ಮಾಡ್ತಾ ಇದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಉಪನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ.
2018 ರ ಚುನಾವಣೆಯಲ್ಲಿ ತುಂಬಾ ಈ ರೀತಿ ಪತ್ರಗಳು ಬಂದಿದ್ದವು, ನಾವು ಆವಾಗ್ಲೂ ದೂರು ಕೊಟ್ಟಿದ್ದೇವೆ. ಆದರೆ, ಯಾವುದೇ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಲ್ಕು ವರ್ಷದಿಂದ ಇಲ್ಲದ್ದು ಮತ್ತೆ ಈಗ ಅನಾಮಧಯೇ ಪತ್ರ ಹಾಕುತ್ತಿದ್ದಾರೆ. ಮುರುಘಾಮಠದ ಶಿವಯೋಗಿ ಸ್ವಾಮಿಜಿಯವರು ಎಸ್ ಡಿ ಎಂ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.
ಅವರ ಸಾವಿನಲ್ಲಿ ಪ್ರಮುಖ ಆರೋಪಿಯನ್ನ ಮಾಡಿ ಮತ್ತೆ ಜೈಲಿಗೆ ಕಳಿಸುತ್ತೇವೆ ಎಂದು ಓರ್ವ ವಕೀಲರು, ಮೂವರು ಬಿಜೆಪಿ ಮುಖಂಡರು ನಮ್ಮಜೊತೆ ಇದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ವಿಜಯಲಕ್ಷ್ಮಿ ಎಂಬ ಮಹಿಳೆ ಈ ರೀತಿ ಪಿತುರಿ ಮಾಡುತ್ತಿದ್ದಾಳೆ.
ಚುನಾವಣೆ ಸಮೀಪ ಬಂದಾಗ ಮಾತ್ರ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ನಿಮ್ಮ ಕಡೆ ದಾಖಲಾತಿಗಳು ಇದ್ರೆ ಕೋರ್ಟಗೆ ಹೋಗಲಿ, ಈ ಲೇಟರ್ ನಲ್ಲಿ ವಿಜಯಲಕ್ಷ್ಮಿ ಜೊತೆ ಮಾತನಾಡಿದರೆ ನಿಮ್ಮ ಸಮಸ್ಯೆ ಸಾಲ್ವ ಆಗುತ್ತೆ ಎಂದು ಉಲ್ಲೇಖ ಮಾಡಿದ್ದಾರೆ.
ನಾವು ಯಾವ ಬೆದರಿಕೆ ಪತ್ರಕ್ಕೆ ಹೆದರಲ್ಲ. ನಮ್ಮನ್ನ ಕುಗ್ಗಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇದು ಸೇಡಿನ ರಾಜಕಾರಣ ಎಂದು ಶಿವಲೀಲಾ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುತ್ರಿ ವೈಶಾಲಿ ಕುಲಕರ್ಣಿ, ಕಾಂಗ್ರೆಸ್ ಮುಖಂಡರಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಇಮ್ರಾನ್ ಕಳ್ಳಿಮನಿ, ಬಸವರಾಜ ಜಾಧವ, ನವೀನ ಕದಂ, ಚೀನಿ ಬಸು, ನಿರ್ಮಲಾ ಹೊಂಗಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.