*ಆ. 26ರಂದು ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ*
ಹುಬ್ಬಳ್ಳಿ ಪ್ರಜಾಕಿರಣ. ಕಾಮ್ : ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ, ಸೆಂಟರ್ ಫಾರ್ ಆ್ಯಶ್ ಯುಟಿಲಿಜೇಶನ್ ಟೆಕ್ನಾಲಜಿ ಆ್ಯಂಡ್ ಎನ್ವಿರಾನ್ ಮೆಂಟ್ ಕನ್ಸರರ್ವೇಶನ್ ಶಕ್ತಿ ನಗರ, ದ್ರಾಕ್ಷಾಯಣಿ ಭಾಲಚಂದ್ರ ಜಾಬಶೆಟ್ಟಿ ಫೌಂಡೇಶನ್ ರಾಮದುರ್ಗ, ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ ಹಾಗೂ ಗ್ರೀನ್ ಲ್ಯಾಂಡ್ ಬಾಯೋಟೆಕ್ ರಾಮದುರ್ಗ ವತಿಯಿಂದ ಹುಬ್ಬಳ್ಳಿಯಲ್ಲಿ
ಆ. 26ರಂದು ಶನಿವಾರ ಬೆಳಗ್ಗೆ 10ಗಂಟೆಗೆ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ನಡೆಯಲಿದೆ.
ಕಳೆದ ಹಲವಾರು ದಶಕಗಳಿಂದ ದೇಶದ್ಯಾಂತ 3 ಸಾವಿರ ತ್ಯಾಜ್ಯ ನಿರ್ವಹಣೆ ಘಟಕಗಳಲ್ಲಿನ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಖರಗೊಂಡಿರುವ 13 ಸಾವಿರ ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ಪರಿಸರದ ಮೇಲೆ ಹಾಗೂ ಮಾನವನ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮ ದಿಂದ ಮುಕ್ತಿ ದೊರಕಿಸಲು ರಾಷ್ಟ್ರೀಯ ಹಸಿರು ಪೀಠವು ಈಗಾಗಲೇ ನಿರ್ದೇಶನ ನೀಡಿದೆ.
ಈ ಸಂಬಂಧ ಪರಿಸರಕ್ಕೆ ಉಂಟಾಗಿರುವ ಹಾನಿಗಾಗಿ 2900 ಕೋಟಿ ಪರಿಹಾರ ಧನ ಪಾವತಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದು, ಒಂದು ವರ್ಷದ ಅವಧಿಯೊಳಗೆ ಎಲ್ಲಾ ಪಾರಂಪರಿಕತ್ಯಾಜ್ಯ ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳಲು ಗಡುವು ನೀಡಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಪುರಸಭೆ ಹಾಗೂ ನಗರ ಸಭೆಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ನಗರಸಭೆಗಳಲ್ಲಿ ಹುದುಗಿರುವ ಪಾರಂಪರಿಕ ತ್ಯಾಜ್ಯವನ್ನು ಸಂಸ್ಕರಿಸಿ ಜೈವಿಕ ಗೊಬ್ಬರ ವನ್ನು ಕೃಷಿ ಬಳಕೆಗಾಗಿ ಮತ್ತು ವೈಜ್ಞಾನಿಕ ವಿಲೇವಾರಿಗಾಗಿ ಪರಿಸರ ಸ್ನೇಹಿ ಹಾಗೂ ಕ್ರಯ ಪರಿಣಾಮಕಾರಿಯಾಗಿ ಸೂಕ್ತ ತಂತ್ರಜ್ಞಾನ ಗಳ ಮೂಲಕ ವರ್ಗಾವಣೆ ಮಾಡುವುದೇ ಈ ಕಾರ್ಯಗಾರದ ಮುಖ್ಯ ಉದ್ದೇಶವಾಗಿದೆ.
ಆಸಕ್ತರು ಆನ್ ಲೈನ್ ನೋಂದಣಿ ಮೂಲಕ ಭಾಗವಹಿಸಬಹುದಾಗಿದೆ ಎಂದು ಸ್ಕೂಲ್ ಆಫ್ ಸಿವಿಲ್ ಇಂಜಿನಿಯರಿಂಗ್ ಮುಖ್ಯಸ್ಥ ಮನೋಜಕುಮಾರ್ ಚಿತ್ತವಾಡಗಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಪರಿಸರ ತಜ್ಞ ಬಾಲಚಂದ್ರ ಜಾಬಶೆಟ್ಟಿ ಅವರ ಮೊ. 9741888365 ಗೆ ಸಂರ್ಪಕಿಸಬಹುದು.