ರಾಜ್ಯ

ಧಾರವಾಡದ ಇಸ್ಪೆಟ್ ಅಡ್ಡೆ ಮೇಲೆ ಪೊಲೀಸ್ ದಾಳಿ : 49 ಲಕ್ಷ ಹಣ ಸೀಜ್,56 ಜನರು, 34 ಕಾರ ವಶಕ್ಕೆ

ಧಾರವಾಡ prajakiran.com : ಧಾರವಾಡದ ಇಸ್ಪೆಟ್ ಅಡ್ಡೆ ಮೇಲೆ‌ ದಾಳಿ ನಡೆಸಿ, ರಮ್ಯ ರೆಸಿಡೆನ್ಸಿಯಲ್ಲಿ 49 ಲಕ್ಷ ಹಣ ಸೀಜ್,56 ಜನರು, 34 ಕಾರ ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಹೇಳಿಕೆ ನೀಡಿದರು.

ಇಂದು ಬೆಳಿಗ್ಗೆ ನಮ್ಮ‌ ಧಾರವಾಡ ಎಸ್ಪಿ ಅವರು ಇಸ್ಪೆಟ್ ಅಡ್ಡೆಗಳ ಮೇಲೆ ರೆಡ್ ಮಾಡಿದ್ದಾರೆ.
ಬೆಳಿಗ್ಗೆ 3,30 ಕ್ಕೆ‌ ಹಲವು ತಂಡಗಳು ರೇಡ್ ಮಾಡಿದ್ದಾರೆ, ಆಗ ಅವರು ಅಂದರ ಬಾಹರ ಆಟವನ್ನು ಆಡುತ್ತಿದ್ದರು.

ಪ್ರೀತಿ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ.
ಪ್ರೀತಿ ಲಾಡ್ಜ್ ನಲ್ಲಿ ,70 ಜನ, 65 ಮೋಬೈಲ್, 8 ಲಕ್ಷ ಸೀಜ್ ಮಾಡಲಾಗಿದೆ.

ಬಹಳ ದಿನದಿಂದ ಈ ರೀತಿ ನಡೆಯುತ್ತಿತ್ತು ಎಂಬ ಮಾಹಿತಿ ಇದೆ.
ಬಿಜೆಪಿ ಕಾಂಗ್ರೆಸ್ ಮುಖಂಡರ ಹೆಸರು ಇರುವುದರ ಬಗ್ಗೆ‌ ಮಾಹಿತಿ ಯನ್ನ‌ಉ ನೀಡಲು ಐಜಿ ನಿರಾಕರಿಸಿದರು.

ನಿಮಗೆ ಬೇಕಾದರೆ ನಾಳೆ‌ ಚಾರ್ಜ್ ಶೀಟ್ ಕೊಡುತ್ತೇವೆ.
ಅವಾಗ ಯಾರ‌್ಯಾರು ಭಾಗಿಯಾಗಿದ್ದಾರೆ ಎಂಬ ಹೆಸರುಗಳು ನಿಮಗೆ ಗೊತ್ತಾಗಲಿದೆ ಎಂದು ಹೇಳಿದರು.

ಪೊಲೀಸ್ ಮೇಲೆ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ
ಜನ ಸಾವಿರ ಹೇಳುತ್ತಾರೆ. ಚಾರ್ಜ್ ಶೀಟ್ ನಲ್ಲಿ ಗೊತ್ತಾಗುತ್ತೆ ಎಂದರು.

ಎಲ್ಲವೂ ತನಿಖೆಯಲ್ಲಿ ಬಯಲಿಗೆ ಬರುತ್ತೆ, ಕಾದು ನೋಡಿ ಎಂದ ಅವರು ಯಾರೇ ತಪ್ಪು ಮಾಡಿದರೆ ಶಿಕ್ಷೆ ಆಗುತ್ತದೆ.

ಎಸ್ಪಿ ಅವರು ಮೂರು ಹುದ್ದೆಗಳನ್ನ ನೋಡಿಕ್ಕೊಳ್ಳುತ್ತಿದ್ದಾರೆ.
ಎಸ್ಪಿ ಅವರಿಗೆ ಇನ್ನೆರಡು ಹುದ್ದೆಯ ಚಾರ್ಜ್ ಕೊಟ್ಟರೆ ಅದನ್ನು ನಿಭಾಯಿಸುತ್ತಾರೆ ಎಂದರು.

ಎಸ್ಪಿ ಕೃಷ್ಣಕಾಂತ ಅವರು ಒಳ್ಳೆಯ ಕೆಲಸವನ್ನ ಮಾಡುತ್ತಿದ್ದಾರೆ ಎಂದು
ಧಾರವಾಡದಲ್ಲಿ ಐಜಿಪಿ ರಾಘವೇಂದ್ರ ಸುಹಾಸ ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *