ಧಾರವಾಡ prajakiran.com : ಧಾರವಾಡ ಜಿಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ
ವಿನಯ ಕುಲಕರ್ಣಿ ಬಂಧನ ಹಿನ್ನೆಲೆ ವಿನಯ ನಿವಾಸಕ್ಕೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ ಕುಲಕರ್ಣಿ ಬಂಧನ ವಿಚಾರ ಇದೊಂದು ರಾಜಕೀಯ ಒತ್ತಡ ಹೇರುವ ಕ್ರಮ ಎಂದು ದೂರಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಂತಹ ಘಟನೆಗಳು ಬಹಳಷ್ಟು ನಡೆದಿವೆ. ಇದು ಅತ್ಯಂತ ನೋವು ನೀಡೋ, ಖಂಡನೀಯ ವಿಷಯ ಎಂದು ಬಿಜೆಪಿಯ ವಿರುದ್ಧ ಕಿಡಿಕಾರಿದರು.
ಬಿಜೆಪಿ ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದೆ.
ಇದನ್ನು ಹಲವಾರು ಕಡೆ ನೋಡಿದ್ದೇವೆ.
ಇದನ್ನು ದೇಶವೇ ಗಮನಿಸುತ್ತಿದೆ.
ರಾಜಕೀಯದಲ್ಲಿ ಭಯ ಹುಟ್ಟಿಸೋ ಕೆಲಸ ಮಾಡಬಾರದು. ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅದನ್ನು ಅಶಕ್ತಗೊಳಿಸೋ ಕೆಲಸ ಮಾಡಬಾರದು ಎಂದು ಹೇಳಿದರು.
ಕಾನೂನಿನ ಮುಂದೆ ಎಲ್ಲರೂ ಸಮಾನರೇ ಆದರೆ ಅನ್ಯಾಯವಾಗಿ ಯಾರಿಗೂ ತೊಂದರೆ ಕೊಡಬಾರದು.
ಈ ಪರಿಪಾಠ ಸಂವಿಧಾನದಲ್ಲಿಯೇ ಇದೆ.
ಬಿಜೆಪಿಯ ಕ್ರಮವನ್ನು ಯಾರೂ ಮೆಚ್ಚೋದಿಲ್ಲ ಎಂದು ಮಾಜಿ ಸಚಿವ
ಎಚ್.ಕೆ. ಪಾಟೀಲ್
ಎಂದರು.