ಧಾರವಾಡ prajakiran.com :
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೂ ಬಿಜೆಪಿ ಸರಕಾರದ ಅಣತಿಯಂತೆ ಕುಣಿಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಪಾಲಿಕೆ ಮಾಜಿ ಸದಸ್ಯ ಆನಂದ ಸಿಂಗನಾಥ ಕಿಡಿಕಾರಿದ್ದಾರೆ.
ಇತ್ತಿಚೆಗೆ ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ಹಾಕಲಾಗಿದ್ದ ಬ್ಯಾನರಗಳನ್ನು ತೆರವುಗೊಳಿಸಿದ ಪಾಲಿಕೆ ಬಿಜೆಪಿ ಶಾಸಕರ ಬ್ಯಾನರ್ ಬಗ್ಗೆ ಜಾಷ ಕುರುಡು ತೋರಿಸಿದ್ದು ಎಕೆ ಎಂದು ಪ್ರಶ್ನಿಸಿದರು.
ಈ ಬಗ್ಗೆ ಸ್ವತಃ ನಾವೇ ಹಲವು ಬಾರಿ ದೂರು ನೀಡಿದ್ದರೂ ತೆರವುಗೊಳಿಸುವ ಗೋಜಿಗೆ ಹೋಗದಿರುವುದು ನಾಚಿಕೆಗೇಡಿನ ಸಂಗತಿ.
ಬಿಜೆಪಿ ಪಕ್ಷದ ಸದಸ್ಯರು ಯಾವುದೇ ಬ್ಯಾನರ್ ಪರವಾನಿಗೆ ಪಡೆಯದೆ ಎಲ್ಲಿ ಬೇಕಂದರಲ್ಲಿ ಅಳವಡಿಸಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ.
ಆದರೆ ಬಿಜೆಪಿಯವರ ಮಾತು ಕೇಳಿ ಮಾಜಿ ಸಚಿವರ ಬ್ಯಾನರ್ ತೆಗೆದು ಹಾಕಿದರು. ಯಾಕೆ ಅಂತಾ ಕೇಳಿದ್ರೆ ಪರವಾನಗಿ ಇಲ್ಲಾ ಅಂತಾ ನೆಪ ಹೇಳಿದರು.
ಆದರೆ ಇವತ್ತು ಧಾರವಾಡ ಗ್ರಾಮೀಣ ಶಾಸಕರ ಹುಟ್ಟು ಹಬ್ಬದ ಬ್ಯಾನರಗಳನ್ನು ಧಾರವಾಡ ಶಹರದ ಮೂಲೆ ಮೂಲೆಯೆಲ್ಲಿ ಹಾಕಿದ್ದಾರೆ. ಒಂದಕ್ಕೂ ಕೂಡ ಪರವಾನಗಿ ಚೀಟಿ ಅಂಟಿಸಿಲ್ಲ.
ಇದರಿಂದಾಗಿ ಪಾಲಿಕೆ ಆದಾಯಕ್ಕೆ ಹೊಡೆತ ಬಿದ್ದಿಲ್ಲವೇ. ಪಾಲಿಕೆಯ ಪರವಾನಿಗೆ ಪಡೆದಿಲ್ಲವೆಂದ ಮೇಲೆ ತೆರವುಗೊಳಿಸದೆ ಮೌನವಹಿಸಿದ್ದು ಎಕೆ ಎಂದು ವಿನಯ ಕುಲಕರ್ಣಿ ಅಭಿಮಾನಿ ಬಳಗದ ಅಧ್ಯಕ್ಷ ಬಸವರಾಜ ಜಾಧವ ಆಕ್ರೋಶ ವ್ಯಕ್ತಪಡಿಸಿದರು.
ನೋಡಿ ಪಾಲಿಕೆ ಅಧಿಕಾರಿಗಳು ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಮಟೆಬಾರದು. ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವುದನ್ನು ಅವರು ಮರೆಯಬಾರದು.
ಎಲ್ಲರಿಗೆ ಒಂದೇ ಆಗಬೇಕು ಮತ್ತು ಪಾಲಿಕೆಯ ಅಧಿಕಾರಿಗಳು ಯಾರಿಗೂ ಹೆದರದೆ ತಮ್ಮ ಕೆಲಸ ಮಾಡದ್ರೆ ಪಾಲಿಕೆಗೆ ಕೂಡ ಆದಾಯ ಬರುತ್ತದೆ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದ್ದಾರೆ.
ಆದರೆ ಪಾಲಿಕೆಯವರು ಬಿಜೆಪಿಯ ಒತ್ತಡದಲ್ಲಿ ಕೆಲಸ ಮಾಡತಾ ಇರೋದು ಜನರಿಗೆ ಗೊತ್ತಾಗುತ್ತದೆ ಮತ್ತು ಅದನ್ನು ನಾವು ಖಂಡಿಸುತ್ತೇವೆ
ಎಂದು ವಿನಯ ಕುಲಕರ್ಣಿ ಅಭಿಮಾನಿ ಬಳಗದ ಅಧ್ಯಕ್ಷ
ಬಸವರಾಜ ಜಾಧವ ಗುಡುಗಿದ್ದಾರೆ.