ರಾಜ್ಯ

ಕ್ಷಮೆ ಕೇಳುವಂತಹ ಪದ ಬಳಕೆ ನಾನು ಮಾಡಿಲ್ಲ, ಸಂಸ್ಕೃತಿಯನ್ನು ನಾನು ಸುಮಲತಾಯಿಂದ ಕಲಿಯಬೇಕಾಗಿಲ್ಲ

ಬೆಂಗಳೂರು prajakiran.com : ಕೆಆರ್‌ಎಸ್ ವಿಚಾರವಾಗಿ ಎಚ್‌ಡಿಕೆ ಹಾಗೂ ಸಂಸದೆ ಸುಮಲತಾ ನಡುವೆ ವಾಗ್ದಾಳಿ ಮುಂದುವರೆದಿದೆ.

ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂಬ ಸುಮಲತಾ ಹೇಳಿಕೆ ಹಿನ್ನೆಲೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಸುಮಲತಾ ಅವರನ್ನು ಕೆಆರ್‌ಎಸ್ ಡ್ಯಾಮ್ ನಲ್ಲಿ ಮಲಗಿಸಬೇಕು ಎಂದು ನಿನ್ನೆ ಹೇಳಿಕೆ ನೀಡಿದ್ದರು.

ಈ ಹೇಳಿಕೆ ಕುರಿತು ಬಾರಿ ವಿರೋಧ ವ್ಯಾಕ್ತವಾಗಿದೆ. ನಾನು ಕ್ಷಮೆ ಕೇಳುವಂತಹ ಪದ ಬಳಕೆ ಮಾಡಿಲ್ಲ. ಯಾವ ಕಾರಣಕ್ಕಾಗಿ ಕಗಷಮೆ ಕೇಳಬೇಕು. ಸಂಸ್ಕೃತಿಯನ್ನು ನಾನು ಸುಮಲತಾಯಿಂದ ಕಲಿಯಬೇಕಾಗಿಲ್ಲ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.

ಮಂಡ್ಯ ಜನರು ಕಷ್ಟದಲ್ಲಿರುವಾಗ ಸುಮಲತಾ ನೋಡಲಿಲ್ಲ ಇವತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲನೆ ಮಾಡಲು ಹೋಗಿದ್ದಾರೆ.

ಇದು ಕೇವಲ ಗಣಿ ಮಾಲೀಕರನ್ನ ಹೆದರಿಸಿ ದುಡ್ಡು ಹೋಡೆಯೋ ಪ್ಲ್ಯಾನ್ ಇದು ಎಂದು ಕಿಡಿ ಕಾರಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಸಂಸದೆ ಸುಮಲತಾ ಅಂಬರೀಶ್ ನಾನು ಹೋಗಿದ್ದು ಹಣ ವಸೂಲಿಗಾಗಿಯೇ ಆದರೆ ಅದು ಸರಕಾರದ ಬೊಕ್ಕಸಕ್ಕೆ ಹೊರತು ಸುಮಲತಾ ಅಂಬರೀಶ್ ಅವರಿಗಲ್ಲ ಎಂದು ಕುಟುಕಿದರು.

ಜೊತೆಗೆ ಮಂಡ್ಯ ಸೋಲು ವಿಚಾರ ಪ್ರಸ್ತಾಪಿಸುವ ಅವರು ಗೆದ್ದಿದ್ದಾದರೂ ಎಲ್ಲಿ. ಅವರೆಲ್ಲಾ ಜೆಡಿಎಸ್ ಕಾರ್ಯಕರ್ತರಲ್ಲವೇ‌ ಅವರಿಗಾದ ಸೋಲು, ನೋವು ಇವರಿಗಿಲ್ಲವೇ ಎಂದು ವ್ಯಂಗ್ಯ ವಾಡಿದರು.

ನಾನು ಅವರಿಗೆ ಸೋಪ್ಪು ಹಾಕುವ ಪ್ರಶ್ನೆಯೇ ಇಲ್ಲ. ಇದು ಮಂಡ್ಯದ ಜನತೆಗೆ ಕೂಡ ಗೊತ್ತಿದೆ ಎಂದು ಗುಡುಗಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *