ಬೀದರ್ prajakiran.com : ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಬೀದರ್ ಜಿಲ್ಲೆಯ ಬಿಎಸ್ ಎಫ್ ಯೋಧ ಹುತಾತ್ಮರಾಗಿದ್ದಾರೆ.
ಜಿಲ್ಲೆಯ ಔರಾದ ತಾಲೂಕಿನ ಆಲೂರ ಗ್ರಾಮದ ಬಸವರಾಜ ಗಣಪತಿ(31) ಹುತಾತ್ಮ ಯೋಧ.
ಮಂಗಳವಾರ ಪಂಜಾಬ್ ಗಡಿಯಲ್ಲಿ ಪಾಕಿಸ್ತಾನದ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಬಸವರಾಜ ವೀರಮರಣ ಹೊಂದಿದ್ದಾರೆ.
ಕಳೆದ 8 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ ಅವರು, ಕೊಲ್ಕತ್ತಾ ಹಾಗೂ ತ್ರಿಪುರದಲ್ಲಿ ಸೇವೆ ಸಲ್ಲಿಸಿದ ಬಳಿಕ ಕಳೆದ 20 ದಿನಗಳಿಂದ ಪಂಜಾಬ್ ಗಡಿಗೆ ನಿಯೋಜನೆಗೊಂಡಿದ್ದರು.