ಧಾರವಾಡ prajakiran.com : ಗಣೇಶ ವಿಸರ್ಜನೆ ವೇಳೆ ಪೊಲೀಸರು ಡಿಜೆ ಹಚ್ಚಿದ್ದಕ್ಕೆ ಕಿರಿಕಿರಿ ಮಾಡಿದ ಹಿನ್ನೆಲೆಯಲ್ಲಿ ರಸ್ತೆ ಮಧ್ಯದಲ್ಲಿಯೇ ಗಣಪತಿ ಬಿಟ್ಟು ತೆರಳಿದ ಘಟನೆ ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
7 ದಿನದ ಗಣೇಶ ವಿಸರ್ಜನೆಯ ವೇಳೆ ಮೆರವಣಿಗೆಗೆ ಪೊಲೀಸರಿಂದ ವಿರೋಧ ವ್ಯಕ್ತವಾಯಿತು.
ಯುವಕರ ತಂಡ ಡಿಜೆ ಸೌಂಡ್ ಮೂಲಕ ಗಣೇಶ ವಿಸರ್ಜನೆಯ ಮೆರವಣಿಗೆ ಮಾಡುತ್ತಿದ್ದರು.
ಮೊದಲು ಪೊಲೀಸರು ಅದಕ್ಕೆ ಸಮ್ಮತಿ ನೀಡಿದ್ದರು ಎನ್ನಲಾಗಿದೆ.
ಆದರೆ ಎಸ್ಪಿ ಅವರು ಅದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಧ್ವನಿ ವರ್ಧಕ ಬಳಕೆಗೆ ಪೊಲೀಸರಿಂದ ವಿರೋಧ ಬಂದಿದೆ.
ಇದರಿಂದಾಗಿ ಪೊಲೀಸರು ಮತ್ತು ಯವಕರು ನಡುವೆ ಮಾತಿನ ಚಕಮಕಿ ನಡೆದಿದೆ.
ಗರಗ ಗ್ರಾಮದ ಬಸ್ ನಿಲ್ದಾಣ ಬಳಿ ಮೆರವಣಿಗೆ ಬರುತ್ತಿದ್ದಂತೆ ಲಾಠಿ ಚಾರ್ಜ್ ಮಾಡಿದ ಆರೋಪ ಕೇಳಿ ಬಂದಿದೆ.
ಇದರಿಂದ ರೊಚ್ಚಗೆದ್ದ ಯುವಕರು
ಮೂರು ಗಣಪತಿಗಳ ಮೆರವಣಿಗೆ ಮೊಟಕುಗೊಳಿಸಿ ರಸ್ತೆಯಲ್ಲಿಯೇ ಗಣಪತಿ ಮೂರ್ತಿ ಬಿಟ್ಟು ತೆರಳಿದ್ದಾರೆ.
ಆ ಬಳಿಕ ಕೆಲ ಯುವಕರೊಂದಿಗೆ ಪೊಲೀಸರ ಮುಂದಾಳತ್ವದಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು.
ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸ್ಥಳೀಯ ಯುವಕರು ಶಾಸಕರನ್ನು ಸಂಪರ್ಕ ಮಾಡಿದರೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.