ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಸುಪ್ರಸಿದ್ಧ ಹೆಬ್ಬಳ್ಳಿಯ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿನ್ನೆ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಈ ಜಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತ ವಿಜಯ ಹಡಪದ ಎಂಬುವರು
ವಿಶಿಷ್ಠವಾದ ಹರಕೆ ಹೊತ್ತು ಎಲ್ಲರ ಗಮನ ಸೆಳೆದಿದ್ದಾರೆ.
ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಕಟು ಸತ್ಯ.
ಬಿಜೆಪಿ ಕಾರ್ಯಕರ್ತ ವಿಜಯ ಹಡಪದ ಎಂಬಾತ ಬಡವರ ಮಗ ಬಸವರಾಜ ಕೊರವರಗೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೇಟ್ ನೀಡಿ ಎಂದು ಬಾಳೆಹಣ್ಣು
ಹರಕೆ ಹೊತ್ತು ವೀರಭದ್ರೇಶ್ವರ ಸನ್ನಿಧಿಗೆ ಪ್ರಾರ್ಥಿಸಿದ್ದಾನೆ.
ಈಗಾಗಲೇ ಹಾಲಿ ಹಾಗೂ ಮಾಜಿಗೆ ಸೆಡ್ಡು ಹೊಡೆದು ಕ್ಷೇತ್ರದಲ್ಲಿ ಅಪಾರ ಯುವಪಡೆಯ ಮೆಚ್ಚುಗೆಗೆ ಕಾರಣವಾಗಿರುವ ಬಸವರಾಜ ಕೊರವರ ಹೆಸರು ಸಂಘ ಪರಿವಾರದ ಹಾಗೂ ಬಿಜೆಪಿ ಪಕ್ಷದ ಟಿಕೇಟ್ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ವರಿಷ್ಠರು ಅವರ ಹೆಸರು ಕೊನೆ ಕ್ಷಣದಲ್ಲಿ ಪರಿಗಣಿಸಿದರೂ ಅಚ್ಚರಿಯೇನಿಲ್ಲ.
ಅವರು ಕಳೆದ ಹಲವು ವರ್ಷಗಳಿಂದ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಹೋರಾಟದ ಮುಂಚೂಣಿಯಲ್ಲಿದ್ದು, ಸಿಬಿಐ ತನಿಖೆ ಮೂಲಕ ಜಿಲ್ಲೆಯ ಹಾಗೂ ರಾಜ್ಯ ರಾಜಕಾರಣದ ಗಮನ ಸೆಳೆದಿದ್ದಾರೆ.
ಅವರ ಕುಟುಂಬ ಸದಸ್ಯರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದು, ಕ್ಷೇತ್ರದಲ್ಲಿ ನಿರಂತರವಾದ ಹೋರಾಟ ನಡೆಸಿ ಬಡವರ ಮಕ್ಕಳ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಜೊತೆಗೆ ಮಾಜಿ ಶಾಸಕಿ ಸೀಮಾ ಮಸೂತಿ ಮನೆಯಲ್ಲಿ ನಡೆದ ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ, ವೀರಯ್ಯ ಚಿಕ್ಕಮಠ ಜೊತೆಗಿನ ಸಭೆಯಲ್ಲಿ ಪಾಲ್ಗೊಂಡು ಹಾಲಿಗೆ ಬಿಟ್ಟು ಬೇರೆ ಯಾರಿಗೆ ಟೀಕೆಟ್ ನೀಡಿ ಎನ್ನುವ ಮೂಲಕ ಕ್ಷೇತ್ರದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಿಜೆಪಿ ಅಧಿಕೃತ ಹೆಸರು ಪ್ರಕಟವಾಗುವರೆಗೆ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆ ಗಾಳಿ ಬೀಸುತ್ತದೆ ಎಂಬುದನ್ನು ಕಾದುನೋಡಬೇಕು.