ರಾಜ್ಯ

ಧಾರವಾಡ : ವಿನಯ ಕುಲಕರ್ಣಿ ಅನುಪಸ್ಥಿತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಪತ್ನಿ ಶಿವಲೀಲಾ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಶಿವಳ್ಳಿ ಗ್ರಾಮದ ದುರ್ಗಾದೇವಿಗೆ ವಿನಯ ಕುಲಕರ್ಣಿಯವರ ಅನುಪಸ್ಥಿತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಅವರ ಪತ್ನಿ ಶ್ರೀಮತಿ ಶಿವಲೀಲಾ ವಿನಯ‌ ಕುಲಕರ್ಣಿಯವರು ಶುಕ್ರವಾರ ಚಾಲನೆ ನೀಡಿ ಮನೆ ಮನೆಗೆ ತೆರಳಿ ವಿನಯ ಕುಲಕರ್ಣಿಯವರ ಪರವಾಗಿ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿನಯ ಕುಲಕರ್ಣಿಯವರ ಜನಪ್ರಿಯತೆಯನ್ನು ಸಹಿಸಲಾರದ ಕುತಂತ್ರಿಗಳು,ಷಡ್ಯಂತ್ರ ಮಾಡಿ ಅವರಿಗೆ ಧಾರವಾಡಕ್ಕೆ ಬರದ ಹಾಗೇ ನಿರಂತರ ಪ್ರಯತ್ನ ಮಾಡುತ್ತಿದ್ದು,ತಾವೆಲ್ಲಾ ಕಾರ್ಯಕರ್ತರು ಒಬ್ಬೊಬ್ಬ ಕಾರ್ಯಕರ್ತ ವಿನಯ ಕುಲಕರ್ಣಿಯಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ನಮ್ಮ ಗೆಲುವು ನಿಶ್ಚಿತವಾಗಿದ್ದು,ತಾವೆಲ್ಲ ಶ್ರಮ ವಹಿಸಿ ದುಡಿಯಬೇಕು. ನೀವೆ ನಮ್ಮ ಶಕ್ತಿ ಎಂದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈಶ್ವರ ಶಿವಳ್ಳಿ,ಅರವಿಂದ ಏಗನಗೌಡರ ಮುಖಂಡರುಗಳಾದ ಪರಮೇಶ್ವರ ಕಾಳೆ,ಅಣ್ಣಪ್ಪ ಚಿನಗುಡಿ,ಶಿವಾನಂದ ಲಂಬಿ,ಸಿದ್ದು ಮುಳ್ಳೂರ,ಫಿರೋಜ ನಾಯ್ಕರ,ಶಿವಪ್ಪ ತಳವಾರ,ಪಾರೂಕ ಜಮಾದಾರ,ಶಂಕರವ್ವ ಮಲ್ಲಿಗವಾಡ,ಜಯಪ್ಪ ಮುದ್ದಿ,ಮಂಜು ಸುಳ್ಳದ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *