ಚೆಟ್ಟಳ್ಳಿ-ಮಡಿಕೇರಿ ರಸ್ತೆ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ
ಶಿವಮೊಗ್ಗ/ಕೊಡಗು prajakiran.com : ಆಶ್ಲೇಷ ಅಬ್ಬರಕ್ಕೆ ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ಮಲೆನಾಡು ಭಾಗ ಸೇರಿದಂತೆ ಕೊಡಗು ಜಿಲ್ಲೆ ತತ್ತರಗೊಂಡಿದೆ.
ಮಡಿಕೇರಿ ಸಮೀಪದ ಕತ್ತಲೆಕಾಡು ಬಳಿ ಭೂ ಕುಸಿತ ಸಂಭವಿಸಿದ್ದು, ಭೂ ಕುಸಿತ ಹಿನ್ನೆಲೆ, ಚೆಟ್ಟಳ್ಳಿ–ಮಡಿಕೇರಿ ರಸ್ತೆ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ತುಂಬಿ ಹರಿಯುತ್ತಿರುವ ಕಾವೇರಿ ಲಕ್ಷ್ಮಣ ತೀರ್ಥ ನದಿಗಳು.ಇದರಿಂದಾಗಿ ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಭಾರೀ ಗಾಳಿ ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು, ಜಿಲ್ಲೆಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಬೇತ್ರಿ ಬಳಿ ತುಂಬಿ ಹರಿಯುತ್ತಿರುವ ಕಾವೇರಿನದಿ,
ಸಿದ್ದಾಪುರ ಸಮೀಪ ಕರಡಿಗೋಡಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕರಡಿಗೋಡಿನಲ್ಲಿ ನದಿತೀರದ ಮನೆಗಳು ಜಲಾವೃತಗೊಂಡಿವೆ.
ಕುಶಾಲನಗರ ಕುವೆಂಪು ಬಡಾವಣೆಯಲ್ಲಿ ಪ್ರವಾಹ ಆತಂಕ ಎದುರಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಅಲ್ಲದೆ, ನದಿ ತೀರದ ಸ್ಥಳಕ್ಕೆ ರಿವತ್ ರಾಫ್ಟಿಂಗ್ ತಂಡ ರವಾನೆ ಮಾಡಲಾಗಿದೆ. ಗೋಣಿಕೊಪ್ಪದಲ್ಲೂ ಭಾರೀ ಮಳೆ ಹಿನ್ನೆಲೆಯಲ್ಲಿ ಗುಡ್ಡಗಾಡು, ಬೆಟ್ಟದ ತಪ್ಪಲಿನ ಜನರು ಎಚ್ಚರದಲ್ಲಿರುವಂತೆ ಸೂಚನೆ ನೀಡಲಾಗಿದೆ.