ಕೇರಳ prajakiran.com : ದೇವರನಾಡು ಕೇರಳದ ಕೊಯಿಕೋಡ್ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ ಸಂಭವಿಸಿದೆ. ಕೋಯಿಕೊಡ್ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಈ ಅವಘಡ ಸಂಭವಿಸಿದೆ.
ಸತತವಾಗಿ ಮಳೆ ಸುರಿಯುತ್ತಿರೋದ್ರಿಂದ ವಿಮಾನದ ರನ್ವೇ ಜಾರು ಮುಖವಾಗಿದ್ದು, ದುಬೈನಿಂದ ಬಂದ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಸಮತೋಲನ ಕಳೆದುಕೊಂಡು ರನ್ವೇನಿಂದ ಜಾರಿ ಅಪಘಾತವಾಗಿದೆ.
ಪರಿಣಾಮ ವಿಮಾನ ಎರಡು ತುಂಡಾಗಿದ್ದು, ವಿಮಾನದ ಪೈಲಟ್ ಸೇರಿ 14ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 125 ಜನ ಗಾಯಗೊಂಡಿದ್ದು 15 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ದುರಾದೃಷ್ಟ ವಿಮಾನದಲ್ಲಿ ಒಟ್ಟು 186 ಪ್ರಯಾಣಿಕರು ಹಾಗೂ 6 ಜನ ವಿಮಾನ ಸಿಬ್ಬಂದಿ ಇದ್ದರೆಂದು ತಿಳಿದು ಬಂದಿದ್ದು, ಎನ್ ಡಿ ಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯ ನಡೆದಿದೆ.
ವಂದೇ ಭಾರತ್ ಮಿಷನ್ ಅಡಿ ಈ ಪ್ರಯಾಣಿಕರನ್ನು ಭಾರತಕ್ಕೆ ಈ ವಿಮಾನದಲ್ಲಿ ಕರೆತರಲಾಗಿತ್ತು. ವಿಮಾನ ಪತನದ ತನಿಖೆ ನಡೆಸಲಾಗುವುದು ಎಂದು ಡಿಜೆಸಿಎಂ ತಿಳಿಸಿದ್ದಾರೆ.