ಅಂತಾರಾಷ್ಟ್ರೀಯ

ಕೇರಳದಲ್ಲಿ ಏರ್ ಇಂಡಿಯಾದ ವಿಮಾನ ಪತನ : ಪೈಲಟ್ ಸೇರಿ 14 ಸಾವು

ಕೇರಳ prajakiran.com : ದೇವರನಾಡು ಕೇರಳದ ಕೊಯಿಕೋಡ್‌ನಲ್ಲಿ ಏರ್‌ ಇಂಡಿಯಾ ವಿಮಾನ ಅಪಘಾತ ಸಂಭವಿಸಿದೆ. ಕೋಯಿಕೊಡ್‌ನ ಕರಿಪುರ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ಈ ಅವಘಡ ಸಂಭವಿಸಿದೆ.

ಸತತವಾಗಿ ಮಳೆ ಸುರಿಯುತ್ತಿರೋದ್ರಿಂದ ವಿಮಾನದ ರನ್‌ವೇ ಜಾರು ಮುಖವಾಗಿದ್ದು, ದುಬೈನಿಂದ ಬಂದ ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ಸಮತೋಲನ ಕಳೆದುಕೊಂಡು ರನ್‌ವೇನಿಂದ ಜಾರಿ ಅಪಘಾತವಾಗಿದೆ.

ಪರಿಣಾಮ ವಿಮಾನ ಎರಡು ತುಂಡಾಗಿದ್ದು, ವಿಮಾನದ ಪೈಲಟ್‌  ಸೇರಿ 14ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 125 ಜನ ಗಾಯಗೊಂಡಿದ್ದು 15 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ದುರಾದೃಷ್ಟ ವಿಮಾನದಲ್ಲಿ ಒಟ್ಟು 186 ಪ್ರಯಾಣಿಕರು ಹಾಗೂ 6 ಜನ ವಿಮಾನ ಸಿಬ್ಬಂದಿ ಇದ್ದರೆಂದು ತಿಳಿದು ಬಂದಿದ್ದು,  ಎನ್ ಡಿ ಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯ ನಡೆದಿದೆ.  

ವಂದೇ ಭಾರತ್​ ಮಿಷನ್ ಅಡಿ ಈ ಪ್ರಯಾಣಿಕರನ್ನು ಭಾರತಕ್ಕೆ ಈ ವಿಮಾನದಲ್ಲಿ ಕರೆತರಲಾಗಿತ್ತು. ವಿಮಾನ ಪತನದ ತನಿಖೆ ನಡೆಸಲಾಗುವುದು ಎಂದು ಡಿಜೆಸಿಎಂ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *