ಧಾರವಾಡ prajakiran.com : ಗೋವಾದ ಮಾಂಡೋವಿ ನದಿ ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ನಿಲುವು ಹಾಗೂ ಕುಮ್ಮಕ್ಕು ಕಾರಣ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕಿಡಿಕಾರಿದ್ದಾರೆ.
ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೆ ಕರ್ನಾಟಕದ ಹಿತಕ್ಕಿಂತ ಗೋವಾದ ಪರ ಒಲುವು ಜಾಸ್ತಿ ಎಂದು ದೂರಿದರು.
ಮಹದಾಯಿ ನದಿ ಬಗ್ಗೆ ರಾಜ್ಯ ಕಾಂಗ್ರೆಸ್ ನಿಲುವು ಎನು ಎಂಬುದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು ಈ ಬಗ್ಗೆ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಎಚ್ಕೆ ಪಾಟೀಲ ಬಾಯಿಬಿಡಬೇಕು ಎಂದು ಕುಟುಕಿದರು.
ಅಲ್ಲದೆ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ ಗುಂಡುರಾವ್ ರಾಜ್ಯದ ಜನತೆಯ ಎದುರು ಈ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಶೆಟ್ಟರ್ ಒತ್ತಾಯಿಸಿದರು.
ಜಿಲ್ಲೆಯ ಅತಿವೃಷ್ಟಿ, ಬೆಳೆ ಪರಿಹಾರ, ರಸ್ತೆ ತಗ್ಗು ಗುಂಡಿ ತುಂಬಲು
ಶೀಘ್ರದಲ್ಲಿಯೇ ಜಿಲ್ಲೆಯಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಸ್ಪಷ್ಟಪಡಿಸಿದರು.
ಇದೇ ವೇಳೆ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ದಿನಾಂಕ ಪ್ರಕಟವಾಗುವ ವೆರೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ.
ಈ ಬಗ್ಗೆ ಊಹಾಪೋಹದ ಮಾಧ್ಯಮಗಳ ಸೃಷ್ಟಿಗೆ ಪ್ರತಿಕ್ರಿಯೆ ನೀಡಲ್ಲ ಎಂದು ನುಣುಚಿಕೊಂಡ ಶೆಟ್ಟರ್ ತಮ್ಮ ಸಂಬಂಧಿಕರಿಗೆ ಇಲ್ಲವೇ ಪುತ್ರನಿಗೆ
ಟಿಕೇಟ್ ಕೊಡಿಸುವ ಕುರಿತು ಯಾವುದೇ ಲಾಭಿ ನಡೆದಿಲ್ಲ ಎಂದು ಸಮಜಾಯಿಸಿ ನೀಡಿದರು.