ಧಾರವಾಡ prajakiran.com : ಕಳೆದ ಕೆಲವು ದಿನಗಳಿಂದ ಬಿಜೆಪಿ ಸೇರುವ ಕುರಿತು ಊಹಾಪೋಹಗಳು ಎದ್ದಿವೆ.
ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ ನಾನು ನನ್ನ ಕಾರ್ಯಕರ್ತರನ್ನು ಬಿಟ್ಟು ಎಲ್ಲೂ ಹೋಗಲ್ಲ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪಷ್ಟಪಡಿಸಿದರು.
ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಆರು ಕುದುರಿ ಮಾರಾಟ ಮಾಡಿದ್ದೇನೆ. ಹೊಸ ಕುದುರೆ ನೋಡಲು ಹೋಗಿದ್ದೆ.
ನಾನು ರಾಜಸ್ತಾನಕ್ಕೆ ಕುದುರೆ ತರಲು ಹೋಗಿದ್ದೆ. ಹೊರತು ಪುಷ್ಕರ್ ಗೆ ಹೋಗಿಲ್ಲ. ದೆಹಲಿಗೆ ಹೋಗಿಲ್ಲ ಎಂದರು.
ಸುಮ್ಮನೇ ಸುದ್ದಿ ಹರಡಿದೆ. ಮಾಧ್ಯಮ ಮಿತ್ರರು ಎಲ್ಲರನ್ನು ಗಲಿಬಿಲಿಗೊಳಿಸಬೇಡಿ. ಒಬ್ಬ ಲೀಡರ್ ಬೆಳಕ ಬೇಕು. 20-25 ವರ್ಷ ನಾನು ಬಹಳ ಕಷ್ಟಪಟ್ಟು ಬೆಳೇದಿದ್ದೇನೆ ಎಂದು ವಿವರಿಸಿದರು.
ನನ್ನ ಕಾರ್ಯಕರ್ತರನ್ನು ನಾನು ಕೈ ಬಿಡಲ್ಲ. ಕಾರ್ಯಕರ್ತರನ್ನು ಕೇಳದೆ ನಾನೇನು ಮಾಡುವುದಿದೆ. ಕಾರ್ಯಕರ್ತರನ್ನು ಬಿಟ್ಟು ನಾನು ಹೋಗಲ್ಲ.
ಕಾರ್ಯಕರ್ತರು ನನ್ನ ಜೀವ. ನಾನು ಅವರನ್ನು ಬಿಟ್ಟು ನಾನು ಎಲ್ಲೂ ಹೋಗಲ್ಲ. ನಾನು ಅವರನ್ನು ನಂಬಿದ್ದೇನೆ. ಅವರು ನನ್ನನ್ನೂ ನಂಬಿದ್ದಾರೆ ಎಂದು ಬಿಜೆಪಿ ಸೇರುವ ಕುರಿತು ಎದ್ದಿರುವ ವಿವಾದಕ್ಕೆ ತೇಪೆ ಎಳೆದರು.