ಧಾರವಾಡ prajakiran.com : ಧಾರವಾಡದ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಪತಿರಾಯನೊಬ್ಬ ಹೆಂಡತಿಯನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರಾಜು ರಾಮಾಪೂರ ಎಂಬಾತನಿಂದಲೇ ಈ ಕೃತ್ಯ ನಡೆದಿದೆ.
ಪತ್ನಿ ಶ್ರೀದೇವಿ ಗೆ ಹೊಡೆದ ನಂತರ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.
ಇದರಿಂದಾಗಿ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಆತಂಕದ ಕಾರ್ಮೊಡ ಕವಿದಿದೆ. ರಾಜು ತನ್ನ ಪತ್ನಿಯಾದ ಶ್ರೀದೇವಿ ಯನ್ನು ಯಾವ ಕಾರಣಕ್ಕೆ ಹೊಡೆದು ಕೊಂದು ಹಾಕಿದ ಬಳಿಕ ತಾನು ಕೂಡ ಆಕೆಯ ದಾರಿ ತುಳಿದ ಕುರಿತು ಕಾರಣ ಈವರೆಗೆ ತಿಳಿದು ಬಂದಿಲ್ಲ.