ಧಾರವಾಡ prajakiran.com : ಧಾರವಾಡದ ಕಲ್ಯಾಣ ನಗರ ಕ್ರಾಸ್ ನಲ್ಲಿ ಸೇಪಟಿ ಟ್ಯಾಂಕರ್ ವೊಂದು ಹರಿದ ಪರಿಣಾಮವಾಗಿ ಮೂರು ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಧಾರವಾಡದ ಸಂಬಂಧಿಕರ ಮನೆಗೆ ತಾಯಿ ಮಗಳು ಆಗಮಿಸಿದ್ದರು. ಮರಳಿ
ಧಾರವಾಡದಿಂದ ದಾಂಡೇಲಿ ಗೆ ತೆರಳಲು ಬಸ್ ನಿಲ್ದಾಣದ ಬಳಿ ನಿಂತಿದ್ದರು.
ಆಗ ಮಗು ಇದೆ ಎಂದು ತಾಯಿ ಕೂಗಿದರೂ ಲಾರಿ ಚಾಲಕ ಅಷ್ಟರಲ್ಲೇ ಅವಘಡ ವೆಸಗಿದ್ದ.
ಇದರಿಂದಾಗಿ ಅನಂ ಐನಾಪುರ ಎಂಬ ಬಾಲಕಿ ಸಾವನ್ನಪ್ಪಿದಳು.
ತಕ್ಷಣ ರೊಚ್ಚಿಗೆದ್ದ ಸ್ಥಳೀಯ ಜನ ಸೇಪಟಿ ಟ್ಯಾಂಕರ್ ಲಾರಿ ಮೇಲೆ ಕಲ್ಲು ತೂರಿ ಗ್ಲಾಸ್ ಗಳನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ಕೂಡಲೇ ಮಾಹಿತಿ ಅರಿತು ಸ್ಥಳಕ್ಕೆ ಧಾವಿಸಿದ ಧಾರವಾಡದ ಸಂಚಾರಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನಕ್ರಮ ಜರುಗಿಸಿದ್ದಾರೆ.