ಮಂಡ್ಯ prajakiran.com : ಕಬ್ಬಿನ ಹಾಲು ಕುಡಿದು ಹಣ ನೀಡದೆ ಅಂಗಡಿಯವನ ಮೇಲೆಯೇ ಹಲ್ಲೆ ಮಾಡಿದ ಹುಚ್ಚಾ ವೆಂಕಟ್ ಹುಚ್ಚಾಟಕ್ಕೆ ಬೇಸತ್ತ ಸಾರ್ವಜನಿಕರು ಸಕ್ಕತ್ತಾಗಿ ಗೂಸಾ ನೀಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಶ್ರೀರಂಗಪಟ್ಟಣದಲ್ಲಿ ಎರಡು ಮೂರು ದಿನಗಳಿಂದ ಅಲೆದಾಡುತ್ತಿರುವ ಹುಚ್ಚಾ ವೆಂಕಟ್ ರಂಪಾಟ ಮಾಡಿದ್ದ.
ಹಣವಿಲ್ಲದೆ ಮಾನಸಿಕ ಅಸ್ವಸ್ಥನಂತೆ ರಸ್ತೆಯಲ್ಲಿ ಜನರನ್ನು ಬೈದುಕೊಂಡು ಓಡಾಡುತ್ತಿರುವ ಹುಚ್ಚಾ ವೆಂಕಟ್ ಗೆ ಸ್ಥಳೀಯರು ದುಡ್ಡು ಕೊಟ್ಟು ಶ್ರೀರಂಗಪಟ್ಟಣ ದಾಟಿಸಿ ಬೆಂಗಳೂರು ಕಡೆಗೆ ಪ್ರಯಾಣ ಮಾಡುವಂತೆ ಮಾಡುವಲ್ಲಿ ಯಶಸ್ಸು ಆಗಿದ್ದಾರೆ.
ಈ ಹಿಂದೆ ಕೂಡ ಹುಚ್ಚಾ ವೆಂಕಟ ರಂಪಾಟ ಮಾಡಿದ್ದರಿಂದ ಸಾರ್ವಜನಿಕರು ಆತನಿಗೆ ಗೂಸಾ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.