ಧಾರವಾಡ Prajakiran.Com : ದೇಶದಾದ್ಯಂತ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅದರಂತೆ ಧಾರವಾಡದ ಸಂಗೋಳ್ಳಿ ರಾಯಣ್ಣ ನಗರದ ಪ್ರಭುರಾಜ ಎಂಬ ಬಾಲಕ ತನ್ನ ಚಿಕ್ಕ ವಯಸ್ಸಿನಲ್ಲೇ ಪ್ರಭು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣೆ ಮಾಡಿದ್ದಾನೆ.
ಸ್ವಯಂ ಪ್ರೇರಿತನಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಧಾರವಾಡದ ವಿವಿಧ ಬಡಾವಣೆಗಳಲ್ಲಿ ತಾನೆ ತಯಾರಿಸಿದ ಹುಂಡಿಯಲ್ಲಿ ಹಣ ಸಂಗ್ರಹಿಸುವ ಮೂಲಕ ನಿಧಿ ಸಮರ್ಪಣೆ ಮಾಡಿದ್ದಾನೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ದೇಶದ ಮೂಲೆ ಮೂಲೆಗಳಿಂದ ವ್ಮಾಪಕ ಜನಬೆಂಬಲ ದೊರೆತಿದೆ.
ಅದರಂತೆ ಧಾರವಾಡದ ಸಂಗೋಳ್ಳಿ ರಾಯಣ್ಣ ನಗರದ ಈ ಬಾಲಕನ ದೇಣಿಗೆ ಸಂಗ್ರಹ ವಿಶೇಷ ಎನ್ನಿಸಿದೆ.