ಹುಬ್ಬಳ್ಳಿ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕೋವಿಡ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಳವಾಗುತ್ತ ಸಾಗಿದೆ.
ಹುಬ್ಬಳ್ಳಿ-ಧಾರವಾಡ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಎಂ.ವಿ ನಾಗನೂರುಅವರು ಕೋವಿಡ್ ಸೋಂಕಿನಿಂದ ಚಿಕಿತ್ಸೆ ಫಲಿಸದೆ ಅವರು ನಿನ್ನೇ ರಾತ್ರಿ ಸಾವನ್ನಪ್ಪಿದ್ದಾರೆ.
ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳಲು ಅವರಿಗೆ ಕಿಮ್ಸ್ ನಲ್ಲಿ ಪಾಸ್ಲಾ ಚಿಕಿತ್ಸೆ ಕೋಡಲು ತಯಾರಿ ನಡೆದಿತ್ತು.
ಒಬ್ಬ ಪ್ಲಾಸ್ಮಾ ದಾನಿ ಮುಂದೆ ಬಂದರೂ ಅವರ ಹಿಮೋಗ್ಲೋಬಿನ್ ಕಡಿಮೆಯಿದೆ ಎಂದು ನಿರಾಕರಿಸಲಾಗಿತ್ತು. ಮತ್ತೊಬ್ಬ ಪ್ಲಾಸ್ಮಾ ದಾನಿಗಳ ಹುಡುಕಾಟದಲ್ಲಿರುವಾಗಲೇ ಎಂ.ವಿ. ನಾಗನೂರ ಇಹಲೋಕ ತ್ಯಜಿಸಿದರು ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಜಾಕಿರಣ.ಕಾಮ್ ಎದುರು ಕಣ್ಣೀರು ಹಾಕಿದರು.
ಅವರು ಕಳೆದ ಆರು ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿ ಧಾರವಾಡ ಉತ್ತರ ಎಸಿಪಿಯಾಗಿ ಸೇವಾ ನಿವೃತ್ತಿ ಹೊಂದಿದ್ದರು.
ಅದಕ್ಕೂ ಮುನ್ನಅವರು ಹುಬ್ಬಳ್ಳಿ ಸಂಚಾರ ಎಸಿಪಿ ಹಾಗೂ ಸಿಸಿಆರ್ ಬಿ ಎಸಿಪಿಯಾಗಿ ಕಾರ್ಯನಿರ್ವಹಿಸಿದ್ದರು. ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.
ಮೂಲತಃ ಅವರು ಗದಗ ತಾಲೂಕಿನ ಸಂಭಾಪುರ ಗ್ರಾಮದವರಾಗಿದ್ದಾರೆ. ಅವರಅಗಲಿಕೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ.