ಹುಬ್ಬಳ್ಳಿ prajakiran.com : ಹಿಂದೊಮ್ಮೆ ತನ್ನ 27 ಲಕ್ಷ ಮರಳಿಸುವಂತೆ ಕೇಳಲು ಹೋದ ಎರಡನೇ ಹಂಡತಿಯನ್ನು ಓಣಿಯಲ್ಲಿಯೇ ಓಡಾಡಿಸಿ ಬಡಿದಿದ್ದ ಬಿಜೆಪಿ ಮುಖಂಡ ಬಸವರಾಜ ಕೆಲಗೇರಿ ಇದೀಗ ಮತ್ತೊಮ್ಮೆತನ್ನ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಶನಿವಾರ ತನ್ನ ಮಗಳ ಕಾಲೇಜ್ ಶಿಕ್ಷಣಕ್ಕಾಗಿ ಹಣ ನೀಡುವಂತೆ ಕೇಳಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದರಿಂದಾಗಿ ರಕ್ತಸಿಕ್ತಗೊಂಡ ಮಹಿಳೆ ಅನಿತಾ ಕೋಮಾ ಸ್ಥಿತಿಗೆ ಹೋಗಿದ್ದಾಳೆ.
ಅವಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಷ್ಟೆಲ್ಲಾ ಅವಾಂತರವಾದರೂ ಹುಬ್ಬಳ್ಳಿ ಪೊಲೀಸರು ಕ್ಯಾರೆ ಎನ್ನದಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.
ಬಿಜೆಪಿ ಮುಖಂಡರ ಕೃಪಾಕ್ಷಟಕ್ಷದಿಂದ ಈ ನೋಂದ ಮಹಿಳೆಗೆ ನ್ಯಾಯವೂ ಮರಿಚಿಕೆಯಾಗಿದೆಯೇ ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.
ಜಿಲ್ಲೆಯ ಮಹಿಳಾ ಸಾಂತ್ವನ ಕೇಂದ್ರಗಳು, ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ, ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆ, ಮಹಿಳಾ ಹಕ್ಕುಗಳ ಹೋರಾಟಗಾರ್ತಿಯರು, ಮಹಿಳಾ ದೌರ್ಜನ್ಯ ಹೋರಾಟ ಸಮಿತಿ, ಮಹಿಳಾ ಸಂಘಟನೆಗಳು, ವಿರೋಧ ಪಕ್ಷದ ನಾಯಕರು ಮೌನಕ್ಕೆ ಶರಣಾಗಿರುವುದು ಏಕೆ.
ಈ ಮಹಿಳೆಗೆ ನ್ಯಾಯ ಕೊಡಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿರುವುದು ಯಾಕೆ ಎಂದು ಯಾರೊಬ್ಬರು ಪ್ರಶ್ನಿಸದಿರುವುದು ದುರಂತದ ಸಂಗತಿಯಾಗಿದೆ.
ಈ ಬಗ್ಗೆ ಈಗಲಾದರೂ ಧಾರವಾಡ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗುತ್ತಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.