ರಾಜ್ಯ

ಬಿಜೆಪಿ ಮುಖಂಡನಿಂದ ಎರಡನೇ ಹೆಂಡತಿ ಮೇಲೆ ಮತ್ತೆ ಮಾರಣಾಂತಿಕ ಹಲ್ಲೆ….!

ಹುಬ್ಬಳ್ಳಿ prajakiran.com : ಹಿಂದೊಮ್ಮೆ ತನ್ನ 27 ಲಕ್ಷ ಮರಳಿಸುವಂತೆ ಕೇಳಲು ಹೋದ ಎರಡನೇ ಹಂಡತಿಯನ್ನು ಓಣಿಯಲ್ಲಿಯೇ ಓಡಾಡಿಸಿ ಬಡಿದಿದ್ದ ಬಿಜೆಪಿ ಮುಖಂಡ ಬಸವರಾಜ ಕೆಲಗೇರಿ ಇದೀಗ ಮತ್ತೊಮ್ಮೆತನ್ನ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಶನಿವಾರ ತನ್ನ ಮಗಳ ಕಾಲೇಜ್ ಶಿಕ್ಷಣಕ್ಕಾಗಿ ಹಣ ನೀಡುವಂತೆ ಕೇಳಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದರಿಂದಾಗಿ ರಕ್ತಸಿಕ್ತಗೊಂಡ ಮಹಿಳೆ ಅನಿತಾ ಕೋಮಾ ಸ್ಥಿತಿಗೆ ಹೋಗಿದ್ದಾಳೆ.

ಅವಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಷ್ಟೆಲ್ಲಾ ಅವಾಂತರವಾದರೂ ಹುಬ್ಬಳ್ಳಿ ಪೊಲೀಸರು ಕ್ಯಾರೆ ಎನ್ನದಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.

ಬಿಜೆಪಿ ಮುಖಂಡರ ಕೃಪಾಕ್ಷಟಕ್ಷದಿಂದ ಈ ನೋಂದ ಮಹಿಳೆಗೆ ನ್ಯಾಯವೂ ಮರಿಚಿಕೆಯಾಗಿದೆಯೇ ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.

ಜಿಲ್ಲೆಯ ಮಹಿಳಾ ಸಾಂತ್ವನ ಕೇಂದ್ರಗಳು, ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ, ಮಹಿಳಾ ಮತ್ತು ಮಕ್ಕಳಅಭಿವೃದ್ದಿ ಇಲಾಖೆ, ಮಹಿಳಾ ಹಕ್ಕುಗಳ ಹೋರಾಟಗಾರ್ತಿಯರು, ಮಹಿಳಾ ದೌರ್ಜನ್ಯ ಹೋರಾಟ ಸಮಿತಿ, ಮಹಿಳಾ ಸಂಘಟನೆಗಳು, ವಿರೋಧ ಪಕ್ಷದ ನಾಯಕರು ಮೌನಕ್ಕೆ ಶರಣಾಗಿರುವುದು ಏಕೆ.

ಈ ಮಹಿಳೆಗೆ ನ್ಯಾಯ ಕೊಡಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿರುವುದು ಯಾಕೆ ಎಂದು ಯಾರೊಬ್ಬರು ಪ್ರಶ್ನಿಸದಿರುವುದು ದುರಂತದ ಸಂಗತಿಯಾಗಿದೆ.

ಈ ಬಗ್ಗೆ ಈಗಲಾದರೂ ಧಾರವಾಡ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗುತ್ತಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *