ಧಾರವಾಡ prajakiran. com : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ
ಪ್ರೋ. ಎಸ್.ಐ. ಬಿರಾದಾರ (59)ಅವರು ಗುರುವಾರ ಮಧ್ಯಾಹ್ನ ಕರೋನಾಗೆ ಬಲಿಯಾಗಿದ್ದಾರೆ.
ಅವರು ಕಳೆದ ಹಲವಾರು ದಿನಗಳಿಂದ ಕರೋನಾ ಪಾಸಿಟಿವ್ ಆಗಿ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದರು.
ಅವರು ಸದಾಕಾಲವೂ ತಲೆ ಮೇಲೆ ಗಾಂಧಿ ಟೋಪಿ ಧರಿಸಿ ಎಲ್ಲೆಡೆ ಸಂಚರಿಸುತ್ತಾ ಸರಳ, ನಡೆ ನುಡಿ ಮೂಲಕ ವಿದ್ಯಾರ್ಥಿಗಳ
ಗಮನ ಸೆಳೆದಿದ್ದರು.
ಅವರು ಒಬ್ಬ ಪುತ್ರ ಹಾಗೂ
ಅಪಾರ ವಿದ್ಯಾರ್ಥಿ ಬಳಗವನ್ನು
ಅಗಲಿದ್ದಾರೆ.
ಅವರ ಅಗಲಿಕೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಮುದಾಯದ ಯುವ ಮುಖಂಡ ಮಂಜು ಹೊಂಗಲದ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.