ಬೆಂಗಳೂರು prajakiran.com : ರಾಜ್ಯದೆಲ್ಲಡೆ ನಿನ್ನೇಯಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಅವಘಡ ಸಂಭವಿಸುತ್ತಿವೆ.
ಇದೇ ವೇಳೆ ಹಾಸನ ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿಯಾಗಿದೆ. ಸಂಕಲಾಪುರ ಗ್ರಾಮದ ಸಿದ್ದಯ್ಯ(60)ಮೃತ ವ್ಯಕ್ತಿಯಾಗಿದ್ದಾರೆ. ನಿನ್ನೆ ಸಂಜೆ ಅವರು ಕಾಣೆಯಾಗಿದ್ದರು.
ಇನ್ನೂ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿಯಅರ್ಚಕ ನಾರಾಯಣಾಚಾರ್ಯ ಸೇರಿ ಅವರ ಕುಟುಂಬದ ಐದು ಜನ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರೆದಿದೆ.
ಅದೇ ರೀತಿ ಮೈಸೂರು ಕೆಆರ್ ಎಸ್ ಭರ್ತಿ ಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಚಾರ್ಮಡಿ ಘಾಟ ರಸ್ತೆ ಸಂಚಾರಅಸ್ತವ್ಯಸ್ತಗೊಂಡಿದೆ. ಗುಡ್ಡ ಕುಸಿತ ಪರಿಣಾಮಾ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ತುಂಬಿ ಹರಿಯುತ್ತಿದ್ದು, ರುದ್ರರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಪರಿಣಾಮ ಕಡಲಕೊರೆತ ಉಂಟಾಗಿದೆ. ಉಡುಪಿ-ಕಾಪು ರಸ್ತೆ ಹಾಳಾಗಿದೆ. ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.