ಚಿಕ್ಕಮಗಳೂರು Prajakiran.com : ನಟ ಸಂಚಾರಿ ವಿಜಯ್ ಪಾರ್ಥಿವ ಶರೀರ ಅವರ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲಾ ಕಡೂರಿನ ಪಂಚನಹಳ್ಳಿಯ ಸ್ನೇಹಿತ ರಘು ಅವರ ತೋಟದ ಮಣ್ಣಿನಲ್ಲಿ ಲೀನವಾಯಿತು.
ಅಂತ್ಯಕ್ರಿಯೆ ನೆರವೇರಿಸುವ ಮುನ್ನ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸರು ಗೌರವ ನಮನ ಸಲ್ಲಿಸಿದರು.
ಸರಕಾರಿ ಗೌರವದ ಬಳಿಕ ವೀರಶೈವ ಲಿಂಗಾಯತ ಧಾರ್ಮಿಕ ವಿಧಿ ವಿಧಾನದ ಪ್ರಕಾರ ವಿಭೂತಿ, ಬಿಲ್ವಪತ್ರೆ ಬಳಸಿ ಪೂಜೆ ಮಾಡಿ ಆನಂತರ ಅಂತ್ಯಕ್ರಿಯೆ ನಡೆಸಲಾಯಿತು.
ಕುಪ್ಪೂರು ಯತೀಶ್ವರ ಶಿವಾಚಾರ್ಯ ಶ್ರಿಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸಹೋದರ ಸಿದ್ದೇಶ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ವೇಳೆ ಸಚಿವ ಮಧುಸ್ವಾಮಿ, ಶಾಸಕ ಸಿ.ಟಿ.ರವಿ, ಅನೇಕ ಮಠಾಧೀಶರು, ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.