ಬಳ್ಳಾರಿ prajakiran.com : ಭೂಗತ ಪಾತಕಿ ಬಚ್ಚಾಖಾನ್ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ನಾಲ್ವರು ಡಿ ಎ ಆರ್ ಪೊಲೀಸ್ ಪೇದೆಗಳ ಅಮಾನತು ಮಾಡಲಾಗಿದೆ.
ಬಳ್ಳಾರಿ ಕೇಂದ್ರ ಕಾರಾಗೃಹ ದಿಂದ ಧಾರವಾಡ ಜಿಲ್ಲೆಯ ನ್ಯಾಯಾಲಯಕ್ಕೆ ಕರೆದೊಯ್ದು ವೇಳೆ ಆರೋಪಿ ಬಚ್ಚಾಖಾನ್ ನನ್ನ ಹೊಟೇಲ್ ಗೆ ಕರೆದೊಯ್ದಿದ್ದ ಪೇದೆಗಳು ಸರಸ ಸಲ್ಲಾಪ ಕ್ಕೆ ಅವಕಾಶ ಕಲ್ಪಸಿದ ಆರೋಪ ಎದುರಿಸುತ್ತಿದ್ದರು.
ಧಾರವಾಡದ ಪ್ರಕೃತಿ ರೆಸಿಡೆನ್ಸಿ ಲಾಡ್ಜ್ ಗೆ ಕರೆದೊಯ್ದಿದ್ದ ಪೊಲೀಸ್
ಪೇದೆಗಳಾದ ಯೋಗೇಶಾಚಾರಿ, ಎಸ್ ಶಶಿಕುಮಾರ್. ರವಿಕುಮಾರ್, ಸಂಗಮೇಶ್ ಕಾಳಗಿ ಅಮಾನತುಗೊಂಡವರು.
ನಾಲ್ವರು ಪೇದೆಗಳನ್ನ ಅಮಾನತು ಮಾಡಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಆದೇಶ ಹೊರಡಿಸಲಾಗಿದೆ.
ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಡಿಎಸ್ ಪಿ ಡಿಎಆರ್ ಅವರಿಗೆ ಸೂಚನೆ ನೀಡಲಾಗಿದೆ.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಈ ಆದೇಶ ಹೊರಡಿಸಿದ್ದಾರೆ.
ಆರೋಪಿ ಭೂಗತ ಪಾತಕಿ ಬಚ್ಚಾಖಾನ್, ಮೈನೋದ್ದೀನ್ ಪಟೇಲ್. ಮೊಹಮ್ಮದ್ ಯೂನೂಸ್. ಫಜಲ್ ಕುಂದಗೋಳ ರನ್ನ ಡಿಎಆರ್ ಪೊಲೀಸರು ನ್ಯಾಯಾಲಯಕ್ಕೆ ಕರೆದೊಯ್ದಿದ್ದರು.