ಧಾರವಾಡದ ಲಾಡ್ಜ್ ವೊಂದರಲ್ಲಿ ‘ರಂಗಿನಾಟ’ ವಾಡಲು ಮುಂದಾಗಿದ್ದಾಗ ಘಟನೆ ಬಯಲು
ಮತ್ತೋಮ್ಮೆ ಕರ್ತವ್ಯ ದಕ್ಷತೆ ಮರೆದ ಪೊಲೀಸ್ ಆಯುಕ್ತ ಲಾಬುರಾಮ್
ಧಾರವಾಡ prajakiran. com : ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಹಾಜರು ಆಗಲು ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಧಾರವಾಡಕ್ಕೆ ಬಂದಿದ್ದ ಭೂಗತ ಪಾತಕಿ ಬಚ್ಚಾಖಾನ್ ವಿಚಾರಣೆ ಮುಗಿಸಿಕೊಂಡು ಹೋಗುವಾಗ ತನ್ನ
“ಲವರ್ ” ಜೊತೆ ರಂಗಿನಾಟವಾಡಲು ಮುಂದಾಗಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.
ಅಚ್ಚರಿಯ ಸಂಗತಿ ಎಂದರೆ ಆತನಿಗೆ ಬಿಗಿ ಭದ್ರತೆ ನೀಡಿದ್ದ ಪೊಲೀಸರೇ ಆತನ ಹೀನ ಕೃತ್ಯಕ್ಕೆ ಸಾಥ್ ನೀಡಿದ್ದು ಕರ್ನಾಟಕ ಪೊಲೀಸರು ತಲೆ ತಗ್ಗಿಸುವಂತೆ ಮಾಡಿದೆ.
ಇದು ಪೊಲೀಸರು ಇವತ್ತು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ಹಾಗೂ ಅವವ್ಯಸ್ಥೆಗೆ ಹಿಡಿದ ಕೈ ಗನ್ನಡಿಯಾಗಿದೆ.
ಒಂದು ಸಮಾಧಾನ ಹಾಗೂ ಹೆಮ್ಮೆಯ ವಿಷಯವೆಂದರೆ ದಕ್ಷ ಅಧಿಕಾರಿಯಾಗಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರೇ ಈ ಬೆಚ್ಚಿಬೀಳುವ ಕಿರಾತಕ ಕೆಲಸವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಚ್ಚಾಖಾನ್ ಜೊತೆ ಪೊಲೀಸರು ನಗರದ ಸತ್ತೂರು ಬಳಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಸಮೀಪದ ಲಾಡ್ಜ್ ಗೆ ಹೋಗಿದ್ದ ಮಾಹಿತಿ ಅರಿತು ಪೊಲೀಸ್ ಆಯುಕ್ತರು ದಿಢೀರ್ ದಾಳಿ ನಡೆಸಿ ಈ ರಹಸ್ಯವನ್ನು ಬಯಲು ಮಾಡಿದ್ದಾರೆ.
ಭೂಗತ ಪಾತಕಿ ಬಚ್ಚಾಖಾನ್ ಹಾಗೂ ಆತನ “ಲವರ್” ರೂಮ್ ನಲ್ಲಿ ಸಿಕ್ಕಿ ಬಿದ್ದಿದ್ದರೆ, ಆತನ ಹಲವು ಸಹಚರರು ಹೊರಗಡೆ ಕಾಯುತ್ತಿದ್ದರು ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆತನನ್ನು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ಡ್ರೀಲ್ ಮಾಡುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ
ಖಚಿತವಾದ ಮಾಹಿತಿ ಪಡೆದು ದಾಳಿ ನಡೆಸಿದ್ದರಿಂದ ಡಾನ್ ಜೊತೆಗೆ ಸಿಕ್ಕಿ ಬಿದ್ದ ಆ ರೂಪದರ್ಶಿ ಹಾಗೂ ಅತನ ದಂಧೆಗೆ ಸಾಥ್ ನೀಡಿದ ಆರೋಪ ಎದುರಿಸುತ್ತಿರುವ ಸಹಚರರು, ಪೊಲೀಸರು ಕಕ್ಕಾಬಿಕ್ಕಿಯಾಗಿದ್ದು ಮಾತ್ರ ಸುಳ್ಳಲ್ಲ.