ಅಪರಾಧ

ಭೂಗತ ಪಾತಕಿ ಬಚ್ಚಾಖಾನ್ ಸರಸ ಸಲ್ಲಾಪ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಪೊಲೀಸರ ಕೈ ಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನಂತೆ…..!?

ಧಾರವಾಡ prajakiran.com : ಮುಜುಗರ ತಪ್ಪಿಸಿಕೊಳ್ಳಲು ಪೊಲೀಸ್ ಇಲಾಖೆ ಹೊಸ ಕಥೆ ಕಟ್ಟಿತಾ ಎಂಬ ಪ್ರಶ್ನೆ ಇದೀಗ ಎದುರಾಗಿದೆ‌.

ಭೂಗತ ಪಾತಕಿ ಬಚ್ಚಾಖಾನ್ ಸರಸ ಸಲ್ಲಾಪ ಪ್ರಕರಣಕ್ಕೆ ಪೊಲೀಸ್ ಇಲಾಖೆ ಹೊಸ ಟ್ವಿಸ್ಟ್ ನೀಡಿದೆ.

ಬಚ್ಚಾಖಾನ್ ಪೊಲೀಸರ ಕೈ ಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನೆಂದು ಪ್ರಕರಣ ದಾಖಲು ಮಾಡಿ ಇಡೀ ಪ್ರಕರಣದ ದಾರಿ ತಪ್ಪಿಸಲಾಗಿದೆ ಎಂಬ ಅನುಮಾನ ಬಲವಾಗಿ ಕಾಡಲು ಆರಂಭಿಸಿದೆ.

ಧಾರವಾಡ ಕೋರ್ಟ್‌ಗೆ ಹಾಜರಾಗಿ ವಾಪಸ್ ಹೋಗುವಾಗ ತಪ್ಪಿಸಿಕೊಳ್ಳೋ ಯತ್ನ ಎಂದು ಧಾರವಾಡದ ವಿದ್ಯಾಗಿರಿ‌ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ದಾಖಲಿಸಲಾಗಿದೆ‌.

ಧಾರವಾಡ ಸತ್ತೂರು ಬಳಿಯ ಲಾಡ್ಜ್‌ನಿಂದ ತಪ್ಪಿಸಿಕೊಳ್ಳೋ ಯತ್ನ ಮಾಡಿದ ಅಂತ ಆತನ ರಕ್ಷಣೆಗೆ ನಿಂತ ಪೊಲೀಸರು ಕೇಸು ದಾಖಲು ಮಾಡಿದ್ದಾರೆ ತಮ್ಮ ಕರ್ತವ್ಯ ದ ಮೇಲಿನ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

ವಾಶ್‌ ರೂಮ್‌ಗೆ ಅಂತಾ ಹೇಳಿ ಹೋಗಿದ್ದರೆ ಕರ್ತವ್ಯಲೋಪದಡಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತ್ತು ಮಾಡಿದ್ದೇಕೆ? ಎಂಬುದಕ್ಕೆ ಪೊಲೀಸ್ ಇಲಾಖೆ ಉತ್ತರಿಸಬೇಕಿದೆ.

ಕರ್ತವ್ಯಲೋಪದಡಿ ನಾಲ್ವರು ಡಿ ಎ ಆರ್ ಪೊಲೀಸರ ಅಮಾನತು ಮಾಡಿ ಇಲಾಖೆ ವಿಚಾರಣೆ ಕಾಯ್ದಿರಿಸಿ ಬಳ್ಳಾರಿ ಎಸ್ಪಿ ಆದೇಶ ಹೊರಡಿಸಿರುವುದು ಈ ಪ್ರಕರಣದ ದಾರಿ ತಪ್ಪಿಸುವ ಕೆಲಸ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಇದು ಪೊಲೀಸ್
ಇಲಾಖೆಯ ಮಾನ ಉಳಿಸಿಕೊಳ್ಳೋ‌ ಯತ್ನನಾ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *