ಧಾರವಾಡ prajakiran.com : ನನಗೆ ಹೂವು ಆಗಿ ಬರೋಲ್ಲ. ದಯಮಾಡಿ ಹಾಕಬೇಡಿ ಎಂದು ಕಾರ್ಯಕರ್ತರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮನವಿ ಮಾಡಿದರು.
ಅವರು ಶನಿವಾರ ಧಾರವಾಡ ಭೇಟಿ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅವರನ್ನು ಸ್ವಾಗತಿಸಲು ಮುಗಿಬಿದ್ದರು.
ಇದೇ ವೇಳೆ ಕೆಲವರು ಕಾರ್ಯಕರ್ತರು ಪುಷ್ಪವೃಷ್ಟಿ ಗೈದರು. ‘ನನಗೆ ಸುಂಗಂಧರಾಜ್ ಹೂವು ಆಗಿ ಬರೊಲ್ಲ. ಅದರ ಒಂದು ಹೂವು ಮುಟ್ಟಿದ್ರೂ ಸಾಕು ಅಲರ್ಜಿ ಆಗುತ್ತೆ.ದಯಮಾಡಿ ಹಾಕಬೇಡಿ’ಈ ಸಂದರ್ಭದಲ್ಲಿ ಶಿವಕುಮಾರ ಮನವಿ ಮಾಡಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲಾಯಿತು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ದಿದ್ದರು. ಯಾವುದೇ ಸಾಮಾಜಿಕಅಂತರವು ಇರಲಿಲ್ಲ. ಮಾಸ್ಕ ಕೂಡ ಇಲ್ಲದ್ದು ಕಂಡು ಬಂತು.