ಬೆಂಗಳೂರು prajakiran.com : ಸಿಎಂ ನಾಯಕತ್ವದ ಬದಲಾವಣೆ ವಿಚಾರವಾಗಿ ಸಿ.ಪಿ.ಯೋಗಿಶ್ವರ್ ಮಾತನಾಡಿದ್ದು, ಮುಖ್ಯಮಂತ್ರಿ ಬದಲಾವಣೆ ಮಾಡೋದು ನನ್ನ ಉದ್ದೇಶವಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿರುವ ಅವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಧಿಕಾರದಿಂದ ಇಳಿಸುವುದು ನನ್ನ ಉದ್ದೇಶವಲ್ಲ.
ನಾನು ದೆಹಲಿಯಲ್ಲಿ ಆಗಾಗ ಹೋಗಿ ಬರುತ್ತಿರುತ್ತೇನೆ. ಎಲ್ಲ ವಿಚಾರವನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ.
ನನ್ನ ಅಧಿಕಾರವನ್ನ ನನ್ನ ಮಗ ಚಲಾಯುಸುವುದನ್ನು ನಾನು ಸಹಿಸೋಲ್ಲ. ಅದರಂತೆ ನನ್ನ ಪಕ್ಷದಲ್ಲೂ ಈ ರೀತಿ ನಡೆಯುವುದನ್ನು ನಾನು ಒಪ್ಪುವುದಿಲ್ಲ.
ಪಕ್ಷದ ಕೆಲ ಸ್ನೇಹಿತರು ನನ್ನ ಬಗದಗೆ ಮಾತನಾಡುತ್ತಿದ್ದಾರೆ. ಅವರಿಂದ ಯಾರು ಮಾತನಾಡಿಸುತ್ತಿದ್ದಾರೆ ಎಂದು ತಿಳಿದಿದೆ.
ಹೀಗೆ ಮಾತನಾಡುತ್ತಾ ಹೋದರೆ ಇದಕ್ಕೆಲ್ಲ ಮುಂದೆ ಉತ್ತರ ಕೊಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.