ಬೆಳಗಾವಿ prajakiran.com : ಕುಂದಾನಗರಿ ಬೆಳಗಾವಿಯಲ್ಲಿ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಐವರು ನಕಲಿ ಪತ್ರಕರ್ತರನ್ನು ಖೆಡ್ಡಾಕ್ಕೆ ಕೆಡವುದರಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಜಮಖಂಡಿ ಮೂಲದ ಉದ್ಯಮಿ ಬಸವರಾಜ್ ಖಾನಗೊಂಡ ಎಂಬುವವರನ್ನು ಈ ಖದೀಮರು ಆಡಿಯೋವೊಂದನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.
ಅಲ್ಲದೆ, ಅದನ್ನು ಪ್ರಸಾರ ಮಾಡಬಾರದೆಂದರೆ 5 ಲಕ್ಷ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಎಸಿಪಿ ನಾರಾಯಣ ಭರಮನಿ ಹಾಗೂ ಮಾಳಮಾರುತಿ ಪೋಲಿಸ ಠಾಣೆಯ ಇನ್ಸ್ ಪೆಕ್ಟರ್ ಗಡ್ಡೇಕರ್ ನೇತೃತ್ವದಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ.
ಬಂಧಿತ ಆರೋಪಿ ಗಳನ್ನು ಗೌರಿ ಲಮಾಣಿ, ಮಂಜುಳಾ ಜೆಟ್ಟೆಣ್ಣವರ, ಸಂಗೀತಾ ಕಣಕಿಕೊಪ್ಪ, ರಘುನಾಥ್ ದುಮಾಳೆ, ಸದಾಶಿವ ಚಿಪ್ಪಲಕಟ್ಟಿ ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆ ವೇಳೆ ಬಂಧಿತರ ಬಳಿ ಪ್ರೈಮ್ ನ್ಯೂಸ್ ಯೂಟ್ಯೂಬ್ ಚಾನಲ್ ಗುರುತಿನ ಚೀಟಿಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಬೆಳಗಾವಿ ಜಿಲ್ಲೆಯಷ್ಟೇ ಅಲ್ಲದೆ, ಇಡೀ ರಾಜ್ಯಾದ್ಯಂತ ಇರುವ ನಕಲಿ ಪತ್ರಕರ್ತರು ಹಾಗೂ ಬ್ಲ್ಯಾಕಮೇಲ್ ಪತ್ರಕರ್ತರಿಗೆ ನಡುಕ ಹುಟ್ಟಿಸಿರುವುದು ಸುಳ್ಳಲ್ಲ.