ಬೆಂಗಳೂರು prajakiran.com : ವಿಶ್ವದೆಲ್ಲೆಡೆ ಅತಿವೇಗವಾಗಿ ಹರಡುತ್ತಿರುವ ಒಮಿಕ್ರಾನ್ ವೈರಸ್ ರಾಜ್ಯದಲ್ಲಿ ಕೂಡ ಹರಡುತ್ತಿದೆ.
ನಿನ್ನೇ ಒಂದೇ ದಿನ ಮತ್ತೆ ಐದು ಪ್ರಕರಣಗಳು ಪತ್ತೆಯಾಗಿವೆ.
ಈ ಕುರಿತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಟ್ವೀಟ್ ಮಾಡಿದ್ದು, ಧಾರವಾಡದ 54 ವರ್ಷದ ಪುರುಷ, ಭದ್ರಾವತಿಯ 20 ವರ್ಷದ ಯುವತಿ, ಉಡುಪಿಯ 82 ವರ್ಷದ ಹಿರಿಯ ನಾಗರಿಕ ಹಾಗೂ 72 ವರ್ಷದ ಹಿರಿಯ ಮಹಿಳೆ ಮತ್ತು ಮಂಗಳೂರಿನ 19 ವರ್ಷದ ಯುವತಿ ಎಂದು ಆರೋಗ್ಯ ಸಚಿವರು ದೃಢ ಪಡಿಸಿದ್ದಾರೆ.
ಒಮಿಕ್ರಾನ್ ಕೋವಿಡ್ ವೈರಸ್ ಭದ್ರಾವತಿ,ಉಡುಪಿ, ಮಂಗಳೂರು ಹಾಗೂ ಧಾರವಾಡ ಜಿಲ್ಲೆಯಲ್ಲಿ ದೃಡಪಟ್ಟಿರುವುದು ಈ ಜಿಲ್ಲೆಯ ಜನತೆಯನ್ನು ಚಿಂತೆಗೀಡು ಮಾಡಿದೆ.