ಹಾವೇರಿ (ಶಿಂಗ್ಗಾವಿ) prajakiran.com : ಈ ಬದುಕು ಶಾಶ್ವತ ಅಲ್ಲ, ಯಾವುದೇ ಸ್ಥಾನಮಾನವೂ ಕೂಡ ಶಾಶ್ವತವಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾಗಿ ಮಾತನಾಡಿದರು.
ಅವರು ಭಾನುವಾರ
ಹಾವೇರಿ ಜಿಲ್ಲೆಯ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಮಾತನಾಡಿದರು.
ನಾವು ಎಷ್ಟು ದಿನ ಇರುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ. ಪ್ರೀತಿ, ವಿಶ್ವಾಸದ ಮುಂದೆ ಅಧಿಕಾರ ಮಹತ್ವದ್ದಲ್ಲ ಎಂದರು.
ಮುಖ್ಯಮಂತ್ರಿಯಾದ ಬಳಿಕ ಕ್ಷೇತ್ರದ ಕಡೆ ಗಮನಹರಿಸಲಾಗುತ್ತಿಲ್ಲ. ಸಿಎಂ ಸ್ಥಾನದ ಜೊತೆಗೆ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿಯೇ ಈ ರೀತಿ ಭಾವನಾತ್ಮಕವಾಗಿ ಮಾತನಾಡಿರುವುದು ಹಲವು ರೀತಿ ವಿಶ್ಲೇಷಣೆಗಳಿಗೆ ಎಡೆ ಮಾಡಿಕೊಟ್ಟಿದ್ದು, ಇದು ಸಿಎಂ ಸ್ಥಾನದ ಬದಲಾವಣೆ ಮುನ್ಸೂಚನೆ ಎಂದೇ ರಾಜಕೀಯ ಅಂಗಳದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ.
Share on:
WhatsApp