ಧಾರವಾಡ ಪ್ರಜಾಕಿರಣ. ಕಾಮ್ ಏ.13 : ಕರ್ನಾಟಕ ವಿಧಾಸಭೆಗೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆ ಮೊದಲ ದಿನ (ಏ.13) ಕುಂದಗೋಳ 1, ಧಾರವಾಡ 3, ಹುಬ್ಬಳ್ಳಿ ಧಾರವಾಡ ಪೂರ್ವ 1 ಮತ್ತು ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರಕ್ಕೆ 2 ಸೇರಿ ಒಟ್ಟು 7 ನಾಮಪತ್ರಗಳು ಸಲ್ಕಿಕೆ ಆಗಿವೆ ಎಂದು ಜಿಲ್ಲಾ ಚುನಾವಣಾಧಿಕಶರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕುಂದಗೋಳ- 70 ವಿಧಾನಸಾಭಾ ಮತಕ್ಷೇತ್ರಕ್ಕೆ ಶಿವಾನಂದ ಹಣಮಂತಪ್ಪ ಮುತ್ತಣ್ಣವರ (ಭಾ.ಜ.ಪಾ), ಹುಬ್ಬಳ್ಳಿ ಧಾರವಾಡ ಪೂರ್ವ-72 ವಿಧಾನಸಭಾ ಮತಕ್ಷೇತ್ರಕ್ಕೆ ವೀರಭದ್ರಪ್ಪ ಹಾಲಹರವಿ (ಜನತಾದಳ (ಜ್ಯಾತ್ಯಾತೀತ)), ಹುಬ್ಬಳ್ಳಿ ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರಕ್ಕೆ ಮಲ್ಲಿಕಾರ್ಜುನ ರೊಟ್ಟಗವಾಡ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) ಅವರು ಎರಡು ನಾಮತ್ರಗಳನ್ನು ಮತ್ತು ಧಾರವಾಡ-71 ವಿಧಾನಸಭಾ ಮತಕ್ಷೇತ್ರಕ್ಕೆ ಅಮೃತ ಅಯ್ಯಪ್ಪ ದೇಸಾಯಿ ( ಭಾ.ಜ.ಪಾ), ಮಧುಲತಾ ಗೌಡರ (ಪಕ್ಷೇತರ), ಸಿದ್ದಲಿಂಗೇಶ್ವರ ಬಾಗೂರ ( ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) ನಾಮತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.