ಚೈನ್ನೈ prajakiran.com : ದಕ್ಷಿಣ ಭಾರತದ ಬಹುಭಾಷೆಗಳಲ್ಲಿ ತಮ್ಮ ಕಂಠಸಿರಿ ಮೂಲಕವೇ ವಿಶಿಷ್ಟ ಛಾಪು ಮೂಡಿಸಿರುವ ಮೇರು ಗಾಯಕ ಎಸ್ಪಿ ಬಾಲಸುಬ್ರಮಣ್ಯಅವರ ಚೇತರಿಕೆಗೆ ವಿಶ್ವದೆಲ್ಲಡೆ ಗುರುವಾರ ಸಂಜೆ ಆರು ಗಂಟೆಗೆ ಗಾನ ನಮನ ಸಲ್ಲಿಸಲಾಯಿತು.
ಜಗತ್ತಿನಾದ್ಯಂತ ಕಲಾವಿದರು ತಾವು ಇದ್ದಲ್ಲಿಯೇ ಒಂದು ಹಾಡು ಹಾಡುವ ಮೂಲಕ ದೇವರ ಮೊರೆ ಹೋದರು. ಮತ್ತೇ ಮೊದಲಿನಂತೆ ಗುಣಮುಖರಾಗಿ ಮರಳಲಿ ಎಂದು ಪ್ರಾರ್ಥಿಸಿದರು.
ಗಾನ ಗಾರುಡಿಗ ಇಳಿಯ ರಾಜಾ, ಸುಪರ್ ಸ್ಟಾರ್ ರಜನಿಕಾಂತ್, ಹಿರಿಯ ನಟ ಕಮಲ್ ಹಾಸನ, ಬಾಲಿವುಡ್ ಸಿಂಗರ್ ಎ.ಆರ್. ರೆಹಮಾನ್ ಸೇರಿದಂತೆ ಅನೇಕರು ಸಾಥ್ ನೀಡಿದರು.
ಚೈನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿರುವ ಬಾಲಸುಬ್ರಮಣ್ಯ ಅವರಿಗೆ ಅಲ್ಲಿಯ ವೈದ್ಯರು ಕೂಡ ಗಾಯನದ ಜೊತೆಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವುದು ವಿಶಿಷ್ಟವಾಗಿದೆ.