ಧಾರವಾಡ prajakiran.com : ಧಾರವಾಡದಲ್ಲಿ ಆರಂಭಗೊಂಡ ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ)ಅಂದು ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದರು.
ಹೌದು! ಅವರು ರಾಷ್ಟ್ರಪತಿಗಳಾಗಿದ್ದ ಮುಖರ್ಜಿ, 2016 ಆಗಸ್ಟ್ನಲ್ಲಿ ಪ್ರಸ್ತಾವಕ್ಕೆ ಸಹಿ ಹಾಕುವ ಮೂಲಕ ಧಾರವಾಡದಲ್ಲಿ ಐಐಟಿ ಸ್ಥಾಪಿಸುವುದಕ್ಕೆ ಹಸಿರು ನಿಶಾನೆ ತೋರಿಸಿದ್ದರು.
ದೇಶದಲ್ಲಿ ಹೊಸದಾಗಿ ಐಐಟಿಗಳು ಸ್ಥಾಪನೆಯಾಗಬೇಕಾದ್ರೆ ತಂತ್ರಜ್ಞಾನ ಸಂಸ್ಥೆಗಳ ಕಾಯಿದೆಗೆ ತಿದ್ದುಪಡಿ ತರಬೇಕಾಗುತ್ತದೆ.
ಅದೇ ರೀತಿ ಆ ಕಾಯಿದೆಗೆ ತಿದ್ದುಪಡಿ ತಂದು ಹೊಸದಾಗಿ ಧಾರವಾಡ ಸೇರಿದಂತೆ ಕೇರಳದ ಪಾಲಕ್ಕಾಡ, ಗೋವಾ, ಛತ್ತಿಸಗಡದ ಭಿಲಾಯಿ, ಜಮ್ಮು ಹಾಗೂ ಆಂಧ್ರಪ್ರದೇಶದ ತಿರುಪತಿಯಲ್ಲಿ ಹೀಗೆ ಒಟ್ಟು ದೇಶದ ಆರು ಕಡೆ ಐಐಟಿ ಸ್ಥಾಪಿಸುವ ಪ್ರಸ್ತಾವನ್ನು ಆ ಕಾಯಿದೆಯಲ್ಲಿ ಸೇರಿಸಲಾಗಿತ್ತು.
ಹೀಗಾಗಿ ಆ ಕಾಯಿದೆಗೆ 2016ರ ತಂತ್ರಜ್ಞಾನ ಸಂಸ್ಥೆಗಳ ತಿದ್ದುಪಡಿ ಕಾಯಿದೆಗೆ ಕೂಡ ಸಹಿ ಮಾಡಿದ್ದರು. ಆ ಮೂಲಕ ಅಂದು ಅವರಿಂದಲೇ ಧಾರವಾಡಕ್ಕೆ ಐಐಟಿ ಬಂದಿದೆ.
ಧಾರವಾಡದ ವಾಲ್ಮೀ ಕಟ್ಟಡದಲ್ಲಿ ಐಐಟಿ ತಾತ್ಕಾಲಿಕ ಕ್ಯಾಂಪಸ್ ಇದ್ದು, ಸದ್ಯ ಹೊಸ ಕಟ್ಟಡದ ನಿರ್ಮಾಣ ಕಾರ್ಯವೂ ಭರದಿಂದ ನಡೆದಿರುವುದು ಇಲ್ಲಿ ಸ್ಮರಿಸಬಹುದು.