ಬೆಂಗಳೂರು prajakiran.com : ಯಾರೋ ಮೆಂಟಲ್ ಗಳಿದ್ದಾರೆ. 20, 30, ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳ್ತಾರೆ ಎಂದು ಸಚಿವ ರಮೇಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ರೀತಿ ಖಡಕ್ ಆಗಿ ಟಾಂಗ್ ನೀಡಿದ್ದು, ಯಾವ್ಯಾವ ಸಚಿವರು ಏನೇನೂ ಹೇಳಿದ್ದಾರೆ ಎಲ್ಲವೂ ಗೊತ್ತು ಎಂದು ಕುಟಕಿದ್ದಾರೆ.
ನಿನ್ನೇ ರಾತ್ರಿ ಯಾವ ಹೋಟೆಲ್ ನಲ್ಲಿ ಶಾಸಕರು ಸೇರಿದ್ದರು. ಅಲ್ಲಿ ಏನೂ ನಡೆದಿದೆ ಎಂಬುದನ್ನು ನಾನು ಕೂಡ ಗಮನಿಸುತ್ತಿದ್ದೇನೆ.
ನಾವೇನ್ ಸುಮ್ಮನೇ ಕುಳಿತಿಲ್ಲ. ನಾವುಂಟು ನಮ್ಮ ಮನೆ ಉಂಟು ನಮ್ಮ ಶಾಸಕರು ಉಂಟು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಏನ್ ಕಡ್ಲೆ ಪೂರಿ ವ್ಯಾಪಾರ ಅಲ್ಲ. ಯಾವುದೇ ಶಾಸಕರಿಗೆ ಅಗೌರವ ಬೇಡ ಎಂದು ಹೇಳಿದಅವರು ಸಚಿವ ರಮೇಶ ಜಾರಕಿಹೊಳಿಗೆ ಪರೋಕ್ಷ ಎಚ್ಚರಿಕೆ ನೀಡಿದರು.
ಆ ಮೂಲಕ ಸಚಿವ ರಮೇಶ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ನಡುವೆ ಮತ್ತೇ ಪರಸ್ಪರ ವಾಕ್ಸಮರ ನಡೆಯುವ ಸಾಧ್ಯತೆಗಳು ಸ್ಪಷ್ಟವಾಗಿವೆ.
ಈ ಹಿಂದೆ ಕೂಡ ಇಬ್ಬರು ಕೂಡ ಪರಸ್ಪರ ನಿಂದಿಸಿಕೊಂಡಿದ್ದರು. ಬೆಳಗಾವಿ ಗ್ರಾಮೀಣ ಶಾಸಕ ಲಕ್ಷ್ಮಿ ಹೆಬ್ಬಾಳಕರ್ ಅವರು ಪಿಎಲ್ ಡಿ ಬ್ಯಾಂಕ್ ಚುನಾವಣೆ ಸಂಬಂಧ ಇಬ್ಬರ ನಡುವೆ ರಾಜಕೀಯ ಚದುರಂಗದಾಟ ನಡೆದಿತ್ತು. ಅದರಿಂದ ರೋಸಿ ಆಪರೇಶನ್ ಕಮಲದ ನೇತೃತ್ವ ವಹಿಸಿದ್ದರು.