ಧಾರವಾಡ prajakiran.com : ಮಹಿಳೆಯ ಪ್ರಚೋದನೆಯಿಂದ ಯುವಕನನ್ನ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಲಕುಂಡಿ ಗ್ರಾಮದಲ್ಲಿ ನಡೆದಿದೆ.
ಹೋಳಿಗಣಿ ಸರ್ಕಲ್ ಹತ್ತಿರ ಮೂಲತಃ ದೇವಿಕೊಪ್ಪ ಗ್ರಾಮದ ಗಂಗಾಧರ ನಿಂಗಪ್ಪ ನೂಲ್ವಿ ಹಾಗೂ ಶಾರದಾ ಪಾಟೀಲ ಎಂಬುವರೇ ಕೂಡಿಕೊಂಡು ಜಗದೀಶ ಹನಮಂತಪ್ಪ ತಾಂಬೆ ಎಂಬ ಯುವಕನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಹಿತ್ತಲದಲ್ಲಿ ತಿಪ್ಪೆ ಹಾಕಿದ್ದರ ವಿಷಯವಾಗಿ ಮೇಲಿಂದ ಮೇಲೆ ಜಗಳ ಮಾಡುತ್ತಾ ಬೈದಾಡುತ್ತಾ ಜೀವ ಬೆದರಿಕೆ ಹಾಕುತ್ತಾ ಬಂದು ಅದೇ ವಿಷಯಕ್ಕೆ ವೈಮನಸ್ಸು ಮತ್ತು ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎಂದು ಕೊಲೆಯಾದ ಜಗದೀಶನ ಸಹೋದರ ದೊಂಡಿಬಾ ತಾಂಬೆ ಆರೋಪಿಸಿದ್ದಾರೆ.
ತನ್ನ ಮೇಲಿನ ಸಿಟ್ಟನ್ನ ತೆಗೆದುಕೊಂಡು ಗೌಂಡಿ ಕೆಲಸ ಮಾಡುತ್ತಿದ್ದಅಣ್ಣ ಜಗದೀಶನ್ನ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾನೆ..
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಲಘಟಗಿ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಈ ಕೊಲೆಗೆ ಮಹಿಳೆಯಾದ ಶಾರದಾ ಪಾಟೀಲಳ ಪ್ರಚೋದನೆ ಕಾರಣವೆಂದು ದೂರಿನಲ್ಲಿ ಹೇಳಲಾಗಿದೆ.
ಕೆಲವು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಬಿಟ್ಟು ಬಂದಿರುವ ಗಂಗಾಧರ ಮೊದಲಿಂದಲೂ ಹಲವು ಧಮಕಿಗಳನ್ನ ಕೊಡುತ್ತಿದ್ದನೆಂದು ಹೇಳಲಾಗಿದೆ.
ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 113/2020 ಕಲಂ IPC 1860 (U/s-114,302,504,506,34) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. |