ಅಪರಾಧ

ಧಾರವಾಡದಲ್ಲಿ ಮೊಬೈಲ್ ಕಳ್ಳನನ್ನು ಹಿಡಿದು ಥಳಿಸಿದ ಜನ

ಧಾರವಾಡ: ಮೊಬೈಲ್ ಕಳ್ಳನೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ಧಾರವಾಡದ ಹೊಯ್ಸಳನಗರದಲ್ಲಿ ಸೋಮವಾರ ನಡೆದಿದೆ.

ಬಾಡ ಗ್ರಾಮದ ಕುಮಾರ ಬಡಿಗೇರ ಎಂಬಾತನೇ ಮೊಬೈಲ್ ಕದ್ದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಗೂಸಾ ತಿಂದವನು. 

ಹಲವು ದಿನಗಳಿಂದ ಹೊಯ್ಸಳನಗರದಲ್ಲಿ ಈ ವ್ಯಕ್ತಿ ಮನೆಯೊಳಗಿದ್ದ ಮೊಬೈಲ್ ಗಳನ್ನು ಕದ್ದು ಪರಾರಿಯಾಗುತ್ತಿದ್ದ.

ಸ್ಥಳೀಯರು ಅದೇ ಏರಿಯಾದ ಯುವಕರೇ ಈ ರೀತಿ ಮಾಡುತ್ತಿದ್ದಾರೆಂದು ತಿಳಿದುಕೊಂಡಿದ್ದರು.

ಆದರೆ, ಇಂದು ಕುಮಾರ ಎಂಬ ಈ ವ್ಯಕ್ತಿ ಮೊಬೈಲ್ ಕದಿಯುವಾಗಲೇ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕರು ಕೂಡಲೇ ಆತನನ್ನು ಕಟ್ಟಿ ಗೂಸಾ ನೀಡಿ, ನಂತರ ಉಪನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *