ಧಾರವಾಡ: ಮೊಬೈಲ್ ಕಳ್ಳನೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ಧಾರವಾಡದ ಹೊಯ್ಸಳನಗರದಲ್ಲಿ ಸೋಮವಾರ ನಡೆದಿದೆ.
ಬಾಡ ಗ್ರಾಮದ ಕುಮಾರ ಬಡಿಗೇರ ಎಂಬಾತನೇ ಮೊಬೈಲ್ ಕದ್ದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಗೂಸಾ ತಿಂದವನು.
ಹಲವು ದಿನಗಳಿಂದ ಹೊಯ್ಸಳನಗರದಲ್ಲಿ ಈ ವ್ಯಕ್ತಿ ಮನೆಯೊಳಗಿದ್ದ ಮೊಬೈಲ್ ಗಳನ್ನು ಕದ್ದು ಪರಾರಿಯಾಗುತ್ತಿದ್ದ.
ಸ್ಥಳೀಯರು ಅದೇ ಏರಿಯಾದ ಯುವಕರೇ ಈ ರೀತಿ ಮಾಡುತ್ತಿದ್ದಾರೆಂದು ತಿಳಿದುಕೊಂಡಿದ್ದರು.
ಆದರೆ, ಇಂದು ಕುಮಾರ ಎಂಬ ಈ ವ್ಯಕ್ತಿ ಮೊಬೈಲ್ ಕದಿಯುವಾಗಲೇ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕರು ಕೂಡಲೇ ಆತನನ್ನು ಕಟ್ಟಿ ಗೂಸಾ ನೀಡಿ, ನಂತರ ಉಪನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.