ಅಪರಾಧ

ಧಾರವಾಡದಲ್ಲಿ ಮೊಬೈಲ್ ಕಳ್ಳನನ್ನು ಹಿಡಿದು ಥಳಿಸಿದ ಜನ

ಧಾರವಾಡ: ಮೊಬೈಲ್ ಕಳ್ಳನೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ಧಾರವಾಡದ ಹೊಯ್ಸಳನಗರದಲ್ಲಿ ಸೋಮವಾರ ನಡೆದಿದೆ. ಬಾಡ ಗ್ರಾಮದ ಕುಮಾರ ಬಡಿಗೇರ ಎಂಬಾತನೇ ಮೊಬೈಲ್ ಕದ್ದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಗೂಸಾ ತಿಂದವನು.  ಹಲವು ದಿನಗಳಿಂದ ಹೊಯ್ಸಳನಗರದಲ್ಲಿ ಈ ವ್ಯಕ್ತಿ ಮನೆಯೊಳಗಿದ್ದ ಮೊಬೈಲ್ ಗಳನ್ನು ಕದ್ದು ಪರಾರಿಯಾಗುತ್ತಿದ್ದ. ಸ್ಥಳೀಯರು ಅದೇ ಏರಿಯಾದ ಯುವಕರೇ ಈ ರೀತಿ ಮಾಡುತ್ತಿದ್ದಾರೆಂದು ತಿಳಿದುಕೊಂಡಿದ್ದರು. ಆದರೆ, ಇಂದು ಕುಮಾರ ಎಂಬ ಈ ವ್ಯಕ್ತಿ ಮೊಬೈಲ್ ಕದಿಯುವಾಗಲೇ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕರು ಕೂಡಲೇ ಆತನನ್ನು ಕಟ್ಟಿ ಗೂಸಾ […]