follow/like: facebook.com/prajakirannews
ಧಾರವಾಡ prajakiran.com : ಅಮೆರಿಕಾ, ಕ್ಯಾಲಿಪೋರ್ನಿಯಾ, ಬಹರೇನ್ ಹಾಗೂ ಆಸ್ಟೇಲಿಯಾದ ಹಲವು ಕನ್ನಡಿಗರು ಕೋವಿಡ್ 19 ಉಲ್ಭಣಗೊಂಡ ಹಿನ್ನಲೆಯಲ್ಲಿ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಧಾರವಾಡದಿಂದಲೇ ಆನ್ ಲೈನ್ ಗಣೇಶೋತ್ಸವ ಆಚರಿಸಿ ಭಕ್ತಿಭಾವ ಮೆರೆದಿದ್ದಾರೆ.
ಧಾರವಾಡದ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠರ ಕಣ್ಣೀರ ಕಥೆಗೆ ಮರುಗಿದ ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರಕರ್ನಾಟಕ ಮೂಲದ 40ಕ್ಕೂ ಅಧಿಕ ಕನ್ನಡಿಗರು ವಿದೇಶದಲ್ಲಿ ಆನ್ ಲೈನ್ ಮೂಲಕವೇ ಒಂದಾಗಿ ಗ್ಲೋಬಲ್ ವರ್ಚುವಲ್ ಗಣೇಶೋತ್ಸವ ಆಚರಿಸುತ್ತಿದ್ದಾರೆ.
ಮಂಜುನಾಥ ಹಿರೇಮಠ ಅವರ ಕೆಲಗೇರಿಯ ಮನೆಯ ಅಂಗಳದಲ್ಲಿಯೇ ಈ ಗಣೇಶ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಪೂಜೆ, ಪ್ರಾರ್ಥನೆಗೊಳ್ಳುತ್ತಿದ್ದಾನೆ.
ಆನಂತರ ಇಲ್ಲಿಯೇ ವಿಸರ್ಜನೆಗೊಳ್ಳಲಿದ್ದಾನೆ. ಅವರು ಆನ್ ಲೈನ್ ನಲ್ಲಿಯೇ ಪೂಜೆ ವೀಕ್ಷಿಸಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಆ ಮೂಲಕ ಧನ್ಯತಾ ಭಾವ ಮೆರೆಯುತ್ತಿದ್ದಾರೆ. ಪ್ರಸಾದ ಮಾತ್ರ ಇಲ್ಲಿ ನೆಲೆಸಿರುವ ಅವರ ಕುಟುಂಬದವರ ಕೈ ಸೇರುತ್ತಿದೆ.
ಇಂತಹ ವಿಭಿನ್ನ ಪ್ರಯತ್ನಕ್ಕೆ ಶುಭದಾ ಬೆನ್ನೂರ, ಶಿವು ವಿಭೂತಿ ಸೇರಿ ಹಲವು ಸಮಾನ ಮನಸ್ಕ ಗೆಳೆಯರು ಮುನ್ನುಡಿ ಬರೆದಿದ್ದಾರೆ.
ಇದು ಕಲಾವಿದ ಮಂಜುನಾಥ ಹಿರೇಮಠ ಅವರಿಗೆ ಸಂತಸ ಕೊಟ್ಟಿದ್ದು, ವಿಧಿ ವಿಧಾನಗಳ ಪ್ರಕಾರ ತಾವೇ ತಯಾರಿಸಿದ ಗಣೇಶನಿಗೆ ಪ್ರತಿ ನಿತ್ಯ ಎರಡು ಬಾರಿ ಪೂಜೆ ಸಲ್ಲಿಸಿ, ಅವರಿಗೆಲ್ಲಾ ಆನ್ ಲೈನ್ ದರ್ಶನ ಭಾಗ್ಯ ಕಲ್ಪಿಸುತ್ತಿದ್ದಾರೆ.
ಪರಿಸರಸ್ನೇಹಿ ಗಣೇಶನನ್ನೇ ನಂಬಿ ಬದುಕುತ್ತಿರುವ ಧಾರವಾಡದ ಕೆಲಗೇರಿಯ ಕಲಾವಿದ ಮಂಜುನಾಥ ಹಿರೇಮಠ ಅವರ ನೋವಿಗೆ ಪ್ರಜಾಕಿರಣ.ಕಾಮ್ ಕೂಡ ಈ ಹಿಂದೆ ಧಾವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.