ಧಾರವಾಡ prajakiran.com : ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪಗೂ ಕರೋನಾ ವೈರಸ್ ಎದುರಾಗಿದೆ.
ಅವರು ಕಳೆದ ವಾರವಷ್ಟೇ ಧಾರವಾಡದ ಹೊರ ವಲಯದಲ್ಲಿರುವ ವಿನಯ ಡೇರಿಗೆ ಭೇಟಿ ನೀಡಿ, ಅಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜೊತೆಗೆ ಸಾಕಷ್ಟು ಕಾಲ ಕಳೆದಿದ್ದರು.
ವಿನಯ ಡೇರಿಯಲ್ಲಿ ಚಕ್ಕಡಿ ಬಂಡಿ ಓಡಿಸಿ ಸಂಭ್ರಮಪಟ್ಟಿದ್ದರು. ಅಲ್ಲದೆ, ವಿಶೇಷವಾಗಿ ತಮ್ಮ ನೆಚ್ಚಿನ ಆಕಳು, ಎಮ್ಮೆ, ಕುರಿಗಳ ಜೊತೆಗೆ ಸಮಯ ಕಳೇದಿದ್ದರು. ಈ ವೇಳೆ ತಮ್ಮ ತೋಟಕ್ಕೆ ಕುರಿಗಳನ್ನು ತೆಗೆದುಕೊಂಡು ಹೋಗಲು ಬಂದಿರುವುದಾಗಿ ತಿಳಿಸಿದ್ದರು,
ಇದೀಗ ಮಾಜಿ ಸಚಿವ ವಿನಯ ಕುಲಕರ್ಣಿಗೆ ಕೋವಿಡ್ ಧೃಢವಾದ ಹಿನ್ನೆಲೆಯಲ್ಲಿ ನಟ ದರ್ಶನ್ ಗೆ ಕೋವಿಡ್ ಆತಂಕ ಎದುರಾಗಿದೆ.
ಕರೋನಾ ಪಾಸಿಟಿವ್ ಇದ್ದರೂ ಯಾವುದೇ ರೋಗ ಲಕ್ಷಣಗಳಿಲ್ಲದ ಕಾರಣ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಜೊತೆಗೆ ಸಂಪರ್ಕವಿದ್ದ ಕಾರಣ ಇದೀಗ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕೊರೋನ ವೈರಸ್ ಭೀತಿ ಎದುರಾಗಿದೆ.
ಜೊತೆಗೆ ವಿನಯ್ ಕುಲಕರ್ಣಿ ಫಾರ್ಮ್ ಹೌಸ್ ಬಂದಿದ್ದ ಹಲವು ಅಭಿಮಾನಿಗಳು ಹಾಗೂ ಬೆಂಬಲಿಗರಿಗೂ ಕರೋನಾ ಆತಂಕ ಶುರುವಾಗಿದೆ.