ರಾಜ್ಯ

ಪರೀಕ್ಷೆ ಬರೆಯದೆ ಗೈರಾದವರ ಹೆಸರಿನಲ್ಲಿ ನೌಕರಿಗಿಟ್ಟಿಸಿಕೊಂಡಿದ್ದ 38 ಸಹಶಿಕ್ಷಕರ ಬಂಧಿಸಿದ ಸಿಐಡಿ

ಬೆಂಗಳೂರು ಪ್ರಜಾಕಿರಣ. ಕಾಮ್ : ಸಹಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ 30 ವಿಶೇಷ ತನಿಖಾ ತಂಡಗಳ ಮೂಲಕ ಏಕಕಾಲಕ್ಕೆ 51 ಕಡೆಗಳಲ್ಲಿ ದಾಳಿ ನಡೆಸಿ, 38 ಸಹಶಿಕ್ಷಕರನ್ನು ಬಂಧಿಸಿದೆ.

2013-14 ಸಾಲಿನ‌ ಶಿಕ್ಷಕರ ನೇಮಕಾತಿ ಅಕ್ರಮ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮೂರನೇ ಎಫ್ ಐ ಆರ್ ದಾಖಲಾಗಿದೆ.

ಈ ಪ್ರಕರಣದ ತನಿಖೆ ನಡೆಸಲು 18 ಡಿವೈಎಸ್ಪಿ ಮತ್ತು 15 ಇನ್ಸಪೆಕ್ಟರ್ ಗಳು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಚಿತ್ರದುರ್ಗ ಜಿಲ್ಲೆಯ 51 ಸ್ಥಳಗಳಲ್ಲಿ ನಡೆಸಿದೆ.
ಕೋಲಾರದಲ್ಲಿ 24, ಬೆಂಗಳೂರಿನಲ್ಲಿ 5, ಚಿಕ್ಕಬಳ್ಳಾಪುರ ದಲ್ಲಿ 3 ಹಾಗೂ ಚಿತ್ರದುರ್ಗ ದಲ್ಲಿ ಆರು ಜನರನ್ನು ಬಂಧಿಸಿದೆ.

ಈಗಾಗಲೇ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ 2012-13, 2013-24 ಸಾಲಿನ ಸಹ ಶಿಕ್ಷಕರ ಅಕ್ರಮ ನೇಮಕಾತಿ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಈವರೆಗೆ 15 ಜನ ಶಿಕ್ಷಕರು, 5 ಅಧಿಕಾರಿಗಳು ಸೇರಿದಂತೆ 22 ಜನರನ್ನು ಬಂಧಿಸಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *