ಧಾರವಾಡ prajakiran.com : ಕೊಲೆ ಆರೋಪದಲ್ಲಿ ಬಂಧಿತನಾಗಿದ್ದ ವಿಚಾರಣಾಧೀನ ಖೈದಿಯೊಬ್ಬ ಕೇಂದ್ರ ಕಾರಾಗೃಹದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಜಿಲ್ಲಾಸ್ಪತ್ರೆಯ ಬಳಿ ಅ. 14ರಂದು ಕಟ್ಟಿಕೊಂಡ ಪತ್ನಿ ಸವಿತಾ ಕಿತ್ತೂರಳನ್ನು ಕೊಂದಿದ್ದ ಆರೋಪಿ ಆನಂದ ದುಧನಿಯೇ ನೇಣಿಗೆ ಶರಣಾಗಿದ್ದಾನೆ.
ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಹೊದ್ದುಕೊಳ್ಳಲು ನೀಡಿದ್ದ ಬೆಡ್ಶೀಟ್ನಿಂದಲೇ ನೇಣು ಹಾಕಿಕೊಂಡಿದ್ದಾನೆ.
ಆನಂದ ದುಧನಿಯನ್ನು
ಎರಡು ದಿನಗಳ ಹಿಂದಷ್ಟೇ ಧಾರವಾಡ ಉಪನಗರ ಠಾಣೆ ಪೊಲೀಸರು
ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.